Sports

Ind Vs Sa 2nd Test : ನಾಲ್ಕನೇ ದಿನದಾಟಕ್ಕೆ ವರುಣನ ಅಡ್ಡಿ

ವಾಂಡರರ್ಸ್‌ : ಭಾರತ ಮತ್ತು ದ.ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟಕ್ಕೆ ವರುಣ ದೇವ ಅಡ್ಡಿಪಡಿಸಿದ್ದಾನೆ. ಭಾರತಕ್ಕೆ ಈ ಪಂದ್ಯ ಗೆಲ್ಲಲು 8 ವಿಕೆಟ್‌ಗಳ ಅವಶ್ಯಕತೆ ಇದೆ. ಇನ್ನು ದ.ಆಫ್ರಿಕಗೆ 122 ರನ್‌ಗಳು ಬೇಕಿದೆ.

ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಭಾರತಕ್ಕೆ ಗೆಲುವು ಸಾಧಿಸುವುದು ತುಂಬಾ ಕಷ್ಟವೆನಿಸುತ್ತಿದೆ. ಕೇವಲ ಎರಡು ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿರುವ ದ.ಆಫ್ರಿಕಾ ತಂಡಕ್ಕೆ ಇಂದು ಮತ್ತು ನಾಳೆ ಅವಕಾಶ ಇದೆ. ಹೆಚ್ಚ ಸಮಯ ತೆಗೆದುಕೊಂಡರೂ ಪರ್ವಾಗಿಲ್ಲ, ವಿಕೆಟ್‌ ಕಳೆದುಕೊಳ್ಳದೇ ಆಡಿದರೆ ಭಾರತಕ್ಕೆ ಸೋಲು ಕಟ್ಟಿಟ್ಟಬುತ್ತಿ.

ಭಾರತ ಗೆಲ್ಲಬೇಕೆಂದರೆ ವಿಕೆಟ್‌ ತೆಗೆಯಲೇಬೇಕು. ಪಂದ್ಯ ಯಾವುದೇ ಕಾರಣಕ್ಕೂ ಡ್ರಾ ನಲ್ಲಿ ಅಂತ್ಯವಾಗುವುದಿಲ್ಲ. ಒಂದು ವೇಳೆ ಇಂದು ಮತ್ತು ನಾಳೆ ಬಿಟ್ಟು ಬಿಡದೆ ಮಳೆ ಸುರಿದರೆ ಮಾತ್ರ ಪಂದ್ಯವು ಡ್ರಾನತ್ತ ಮುಖ ಮಾಡುವುದು.

ಸದ್ಯದ ಪರಿಸ್ಥಿತಿಯಲ್ಲಿ ದ.ಆಫ್ರಿಕಾ ತಂಡವೇ ಫೇವರಿಟ್‌ ಆಗಿ ಕಾಣಿಸ್ತಿದೆ.

Share Post