Politics

ಸಮಾವೇಶಕ್ಕೆ ಜನ ಕಡಿಮೆ ಬಂದಿದ್ದಕ್ಕೆ ಕಾರ್ಯಕ್ರಮ ರದ್ದು; ನವಜೋತ್‌ ಸಿಧು

ಚಂಡಿಗಢ: ಪ್ರಧಾನಿ ಮೋದಿ ಪಂಜಾಬ್‌ ಭೇಟಿ ವೇಳೆ ಭದ್ರತಾ ವೈಫಲ್ಯವಾಗಿದೆ ಎಂಬುದು ಸುಳ್ಳು ಎಂದು ಪಂಜಾಬ್‌ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇದೆಲ್ಲಾ ಬೇಕಂತಲೇ ಪ್ರಚಾರಕ್ಕಾಗಿ ಮಾಡಿರೋದು ಎಂದು ಆರೋಪಿಸಿದ್ದಾರೆ.

ಫಿರೋಜ್‌ಪುರದಲ್ಲಿ ಮೋದಿ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ 70 ಸಾವಿರ ಜನರು ಬರುತ್ತಾರೆಂದು ಅಂದಾಜಿಸಲಾಗಿತ್ತು. ಅದಕ್ಕಾಗಿ 70 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, 700ಕ್ಕಿಂತ ಕಡಿಮೆ ಜನ ಬಂದಿದ್ದರು. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಜನರು ಕಡಿಮೆ ಬಂದಿದ್ದ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ ಸಮಾವೇಶವನ್ನು ರದ್ದುಗೊಳಿಸಿ ವಾಪಸ್‌ ತೆರಳಿದ್ದಾರೆ ಎಂದು ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ.

Share Post