DistrictsPolitics

ನಗರಸಭೆ ಸದಸ್ಯರ ಡಿಶುಂಡಿಶುಂ; ಅಧಿಕಾರಿಗಳ ಎದುರೇ ಜಟಾಪಟಿ

ಗದಗ; ಗದಗ ಜಿಲ್ಲೆ ಬೆಟಗೇರಿ ನಗರಸಭೆ ಕಚೇರಿಯಲ್ಲಿ ಎಲ್ಲರ ಎದುರೇ ಸದಸ್ಯರು ಜಟಾಪಟಿ ನಡೆಸಿದ್ದಾರೆ. ನಗರಸಭೆ ಸದಸ್ಯೆಯೊಬ್ಬರ ಪತಿ ಸಚಿವ ಎಚ್‌.ಕೆ.ಪಾಟೀಲ್‌ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆಂಬ ಕಾರಣಕ್ಕಾಗಿ ಈ ಜಟಾಪಟಿ ನಡೆದಿದ್ದು, ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.

ನಗರಸಭೆಯ ಕಾಂಗ್ರೆಸ್ ಸದಸ್ಯ ಜೈನುಲಾದ್ದಿನ್ ನಮಾಜಿ ಹಾಗೂ ಬಿಜೆಪಿ ಸದಸ್ಯೆ ವಿಜಯಲಕ್ಷ್ಮಿ ದಿಂಡೂರ ಪತಿ ಶಶಿಧರ್ ನಡುವೆ ಈ ಜಗಳ ನಡೆದಿದೆ. ನಗರಸಭೆ ಆಯುಕ್ತರ ಕಚೇರಿ ಎದುರಲ್ಲೇ ಇಬ್ಬರೂ ನೂಕಾಟ ತಳ್ಳಾಟ ನಡೆಸಿದ್ದಾರೆ. ಆಗ ಅಧಿಕಾರಿಗಳು ಹಾಗೂ ಇತರೆ ಸದಸ್ಯರು ಇಬ್ಬರ ಜಗಳವನ್ನು ಬಿಡಿಸಿದ್ದಾರೆ.

Share Post