NationalNewsPolitics

ನಾಳೆ ಪದಗ್ರಹಣ; ಸಿದ್ದು ಸಂಪುಟ ಸೇರ್ತಾರಾ 28 ಸಚಿವರು..?

ಬೆಂಗಳೂರು; ನಾಳೆ ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆ 28 ಶಾಸಕರು ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದೆಹಲಿಯಲ್ಲಿ ಸಚಿವಗಿರಿಗಾಗಿ ಲಾಬಿ ಮುಂದುವರೆದಿದೆ.

ನಾಳೆ ಮಧ್ಯಾಹ್ನ 12.30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳು ಕೂಡಾ ನಡೆಯಲಿವೆ. ಸಿದ್ದರಾಮಯ್ಯ ಸಂಪುಟಕ್ಕೆ ಯಾರೆಲ್ಲಾ ಸೇರಲಿದ್ದಾರೆ ಎಂಬುದು ಇಂದು ರಾತ್ರಿಯೊಳಗೆ ಕನ್ಫರ್ಮ್‌ ಆಗಲಿದೆ.

ಮೊದಲ ಹಂತದಲ್ಲಿ 28 ಮಂದಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ 80ಕ್ಕೂ ಹೆಚ್ಚು ಶಾಸಕರು ಲಾಬಿ ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಕೋಟಾದಲ್ಲಿ ಹತ್ತು ಮಂದಿಗೆ, ಡಿ.ಕೆ.ಶಿವಕುಮಾರ್‌ ಕೋಟಾದಲ್ಲಿ ಹತ್ತು ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಉಳಿದ ಎಂಟು ಮಂದಿಯನ್ನು ಹೈಕಮಾಂಡ್‌ ಆಯ್ಕೆ ಮಾಡುತ್ತದೆ ಎಂದು ತಿಳಿದುಬಂದಿದೆ.

ಲಕ್ಷ್ಮಣ ಸವದಿ
ಲಕ್ಷ್ಮಿ ಹೆಬ್ಬಾಳ್ಕರ್
ಸತೀಶ್ ಜಾರಕಿಹೊಳಿ
ಕೆ.ಜೆ. ಜಾರ್ಜ್
ರಾಮಲಿಂಗಾರೆಡ್ಡಿ
ಹ್ಯಾರಿಸ್
ದಿನೇಶ್ ಗುಂಡೂರಾವ್
ಜಮೀರ್ ಅಹಮ್ಮದ್ ಖಾನ್​
ಆರ್.ಬಿ.ತಿಮ್ಮಾಪುರ್
ಎಂ.ಬಿ. ಪಾಟೀಲ್
ಕೆ.ಎಚ್. ಮುನಿಯಪ್ಪ
ಪ್ರಿಯಾಂಕ್ ಖರ್ಗೆ
ಅಜಯ್ ಸಿಂಗ್
ಈಶ್ವರ್ ಖಂಡ್ರೆ
ಹೆಚ್.ಕೆ.ಪಾಟೀಲ್
ಭೀಮಣ್ಣ ನಾಯಕ
ಎಸ್​ಎಸ್​ ಮಲ್ಲಿಕಾರ್ಜುನ
ರುದ್ರಪ್ಪ ಲಮಾಣಿ
ನಾಗೇಂದ್ರ
ಮಧು ಬಂಗಾರಪ್ಪ
ಯು.ಟಿ.ಖಾದರ್
ಬಿ.ಕೆ. ಹರಿಪ್ರಸಾದ್
ಸಲೀಂ ಅಹಮದ್

Share Post