Politics

ಇದು 40% ಕಮಿಷನ್‌ ಸರ್ಕಾರ:ಸಿದ್ದರಾಮಯ್ಯ ಆರೋಪ

ಬೆಳಗಾವಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಎಲ್ಲಿ ನೋಡಿದ್ರೂ ಭ್ರಷ್ಟಾಚಾರ ತಾಂಡವವಾಡ್ತಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ರು. ಬೆಳಗಾವಿಯಲ್ಲಿ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ೪೦% ಕಮಿಷನ್‌ ಆರೋಪ ಇದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇರವಾಗಿಯೇ ಆರೋಪ ಮಾಡಿದ್ರು. ಈ ಬಗ್ಗೆ ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿಯವರಿಗೆ  ಪತ್ರ ಕೂಡಾ ಬರೆದಿದ್ರು. ಈ ಆರೋಪದ ಬಗ್ಗೆ ಈ ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಲಿ. ರಾಜ್ಯದಲ್ಲಿ ಕೆಲಸಗಳೆಲ್ಲೆ ನಿಂತು ಹೋಗಿವೆ, ಪ್ರವಾಹ, ಬರ, ನೆರೆ  ಯಾವುದಕ್ಕೂ ಪರಿಹಾರ ಕೊಟ್ಟಿಲ್ಲ ಎಂದು ಗುಡುಗಿದ್ದಾರೆ.

Share Post