Politics

ಬಿಜೆಪಿ ಸರ್ಕಾರದಲ್ಲಿ ಮೂರನೇ ಸಿಎಂ ಆಗ್ತಾರೆ; ಸತೀಶ್‌ ಜಾರಕಿಹೊಳಿ

ಕೊಪ್ಪಳ: ಬಸವರಾಜ ಬೊಮ್ಮಾಯಿಯವರಿಗೆ ಆರು ತಿಂಗಳಷ್ಟೇ ಅಧಿಕಾರ ಕೊಟ್ಟಿರೋದು. ಅಧಿಕಾರ ನೀಡುವಾಗಲೇ ಷರತ್ತು ಹಾಕಲಾಗಿತ್ತು. ಬಿಜೆಪಿ ಸರ್ಕಾರ ಮೂವರು ಸಿಎಂಗಳು ಆಗುವುದು ಪಕ್ಕಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಬೊಮ್ಮಾಯಿ ಅಧಿಕಾರ ಇರುವುದೇ ಆರು ತಿಂಗಳು. ಈ ಷರತ್ತು ಹಾಕಿಯೇ ಬಿಜೆಪಿ ಹೈಕಮಾಂಡ್‌ ಅವರಿಗೆ ಅಧಿಕಾರ ನೀಡಿತ್ತು. ಈ ಸರ್ಕಾರದಲ್ಲಿ ಮೂರನೇ ಸಿಎಂ ಆಗೋದು ಗ್ಯಾರೆಂಟಿ ಎನ್ನುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿರುವ ಈ ಸಮಯದಲ್ಲಿ ಸತೀಶ್‌ ಜಾರಕಿಹೊಳಿ ಈ ರೀತಿಯ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Share Post