Politics

ಸಮಾಜವಾದಿ ಪಾರ್ಟಿಯಿಂದ ನಿವೃತ್ತ ನೌಕರರಿಗೆ ಭರ್ಜರಿ ಆಶ್ವಾಸನೆ

ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳಿಂದ ಈಗಾಗಲೇ ಆಶ್ವಾಸನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಮಾಜವಾದಿ ಪಕ್ಷ ನಿವೃತ್ತ ಸರ್ಕಾರಿ ನೌಕರರಿಗೆ ಭರ್ಜರಿ ಆಶ್ವಾಸನೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದೆ ಹಳೆಯ ಪೆನ್ಷನ್‌ ಯೋಜನೆ ಪುನಃ ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

2005ಕ್ಕಿಂದ ಮೊದಲು ಇದ್ದ ನಿವೃತ್ತಿ ವೇತನವನ್ನೇ ನೀಡಬೇಕೆಂದು ನಿವೃತ್ತ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಹಳೆಯ ಮಾದರಿ ಪೆನ್ಷನ್‌ ಸ್ಕೀಂ ಜಾರಿಗೆ ತಂದರೆ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಳೇ ಪೆನ್ಷನ್‌ ಸ್ಕೀಂನ್ನು ಪುನಃ ಜಾರಿಗೆ ತರಲಾಗುವುದು ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

Share Post