Bengaluru

ಆರಗ ಜ್ಞಾನೇಂದ್ರ ನೀನು ಅಜ್ಞಾನದ ಜ್ಞಾನೇಂದ್ರ ಆಗಬೇಡ:ಡಿಕೆಶಿ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ವಾರಾಂತ್ಯ ನಿಷೇಧಾಜ್ಞೆ ಜಾರಿ ಮಾಡಿ ಎಲ್ಲೆ ಹೊಟೇಲ್‌, ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬಂದ್‌ ಮಾಡುವ ಬಗ್ಗೆ ವರದಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಶುಕ್ರವಾರ ರಾತ್ರಿ ೧೦ ರಿಂದ ಸೋಮವಾರ ಬೆಳಗಿನ ಜಾವ ೫ರವರೆಗೆ ಬಂದ್‌ ಮಾಡಲು ಸೂಚಿಸಲಾಗಿದೆ.

ಸರ್ಕಾರದ ಆದೇಶದ ವಿರುದ್ಧ ಡಿ.ಕೆ.ಶಿವಕುಮಾರ್‌ ಕೆಂಡಾಮಂಡಲರಾಗಿದ್ದಾರೆ. ಪಾದಯಾತ್ರೆ ಸಲುವಾಗಿ ನಾವು ಹೊಟೇಲ್‌ನಲ್ಲಿ ಮೂರು ಸಾವಿರ ರೂಂಗಳನ್ನು ಬುಕ್‌ ಮಾಡಿದ್ದೇವೆ. ಈಗ ಹೊಟೇಲ್‌, ರೆಸ್ಟೋರೆಂಟ್‌ ಬಂದ್‌ ಮಾಡಿಸೋದು ಯಾವ ನ್ಯಾಯ? ನಮ್ಮ ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡ್ತಿದೆ ಇದು ಸರಿಯಲ್ಲ. ನಿಮಗೊಂದು ಕಾನೂನು ನಮಗೊಂದು ಕಾನೂನಾ..? ಎಂದು ಆಕ್ರೋಶ ಹೊರಹಾಕಿದ್ದಾರೆ. ಏನೇ ಮಾಡಿದ್ರೂ ನಮ್ಮ ಪಾದಯಾತ್ರೆ ನಿಲ್ಲೋದಿಲ್ಲ ಎಂದು ತಮ್ಮ ಕಾರ್ಯಕರ್ತರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದ್ದಾರೆ.

ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ಧಾಲಿ ನಡೆಸಿದ್ದಾರೆ. ಆರಗ ಜ್ಞಾನೇಂದ್ರ ನೀನು ಅಜ್ಞಾನದ ಜ್ಞಾನೇಂದ್ರ ಆಗಬೇಡಪ್ಪ..ನಿನ್ನ ಅಜ್ಞಾನದ ಜ್ಞಾನೇಂದ್ರ ಆಗಿ ಸರ್ಕಾರ ಮತ್ತು ಜನರನ್ನು ಹಾಳು ಮಾಡಬೇಡ. ನಿನಗೆ ಅನುಭವ ಇಲ್ಲ, ಅನುಭವ ಪಡೆದ ಬಳಿಕ ಇಂತಹ ಹೇಳಿಕೆಗಳನ್ನು ನೀಡು ಎಂದು ಕಿಡಿಕಾರಿದ್ದಾರೆ.

Share Post