BengaluruPolitics

ಸಿದ್ದರಾಮಯ್ಯ ಪಕ್ಷಾಂತರಿ ಕುದುರೆ ವ್ಯಾಪಾರಿ; ಬಿಜೆಪಿ ಸರಣಿ ಟ್ವೀಟ್‌

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ಅವರನ್ನು ಪಕ್ಷಾಂತರಿ ಕುದರೆ ವ್ಯಾಪಾರಿ ಎಂದು ಜರಿದಿದೆ. ಪಕ್ಷಾಂತರಿ ಕುದುರೆ ವ್ಯಾಪಾರಿ ಎಂದು ಹ್ಯಾಶ್‌ಟ್ಯಾಗ್‌ ಬಳಸಿ ಸರಣಿ ಟ್ವೀಟ್‌ ಮಾಡಲಾಗಿದೆ. 

 

ಟ್ವೀಟ್‌-೧

ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅತಿಯಾಗಿ ಮಾತನಾಡುವ @siddaramaiah  ಅವರು ಅತಿ ಹೆಚ್ಚು ಬಾರಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕೊಳ್ಳಿ ಇಟ್ಟಿದ್ದಾರೆ. ಪಕ್ಷಾಂತರ ಹಾಗೂ ಕುದುರೆ ವ್ಯಾಪಾರದ ವಿಚಾರ ಬಂದರೆ ವಲಸೆ ನಾಯಕ ಸಿದ್ದರಾಮಯ್ಯ ಅವರೇ ನಿಜವಾದ ಕಿಂಗ್.

ಟ್ವೀಟ್‌-೨

1983 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಸಿದ್ದರಾಮಯ್ಯ ತಮ್ಮ ಸಮಕಾಲೀನ ರಾಜಕಾರಣಿಗಳಿಗಿಂತ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿದ್ದಾರೆ. ಜನತಾ ದಳ, ಜನತಾ ದಳ ಸಂಯುಕ್ತ, ಜೆಡಿಎಸ್, ಅಖಿಲ ಭಾರತ ಪ್ರಗತಿಪರ ಜನತಾ ದಳ ಕೊನೆಗೆ ಅಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದಾರೆ. #ಪಕ್ಷಾಂತರಿಕುದುರೆವ್ಯಾಪಾರಿ ನಿಮ್ಮ ಮುಂದಿನ ಪ್ರಯಾಣ ಎತ್ತ?

ಟ್ವೀಟ್‌-೩

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಸುವ ವಿಚಾರದಲ್ಲಿ @siddaramaiah ಅತ್ಯುತ್ತಮ ದಲ್ಲಾಳಿ. ಸಿದ್ದರಾಮಯ್ಯ ಅವರೇ, 2012 ರಲ್ಲಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಸೋಲಿಸಿ ಬೈರತಿ ಸುರೇಶ್ ಅವರನ್ನು ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿದ್ದು ನೀವಲ್ಲವೇ?

Share Post