Bengaluru

ಕಾಂಗ್ರೆಸ್‌ ಮನಸ್ಥಿತಿ ಅತಂತ್ರ, ನಾನು ಗಟ್ಟಿ; ಸಿಎಂ ಬೊಮ್ಮಾಯಿ

ಬೆಂಗಳೂರು; ಸಿಎಂ ಬದಲಾವಣೆಯಾಗುತ್ತಾರೆಂಬ ವಿಚಾರ ಶುದ್ಧ ಸುಳ್ಳು, ಅದು ಕಾಂಗ್ರೆಸ್‌ ಕುತಂತ್ರ ರಾಜಕಾರಣದ ಒಂದು ಭಾಗ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕೋವಿಡ್‍ನಿಂದ ಗುಣಮುಖರಾದ ಬಳಿಕ ಇಂದು ನಿತ್ಯದ ಆಡಳಿತ ಕೆಲಸಗಳನ್ನ ಪ್ರಾರಂಭ ಮಾಡಿದ ಬೊಮ್ಮಾಯಿ ಅವರು, ಸಿಎಂ ಬದಲಾವಣೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೊನೆಗೂ ಮೌನ ಮುರಿದಿದ್ದಾರೆ. 

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಟ್ವೀಟ್ ಮತ್ತು ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಿಎಂ ಬದಲಾವಣೆ ಅಂತ ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಅತಂತ್ರ ಕಾಡುತ್ತಿದೆ. ಅದನ್ನು ರಾಜ್ಯದ ಜನತೆಗೆ ಹರಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಾನು ಸ್ಥಿತ ಪ್ರಜ್ಞನಾಗಿದ್ದೇನೆ. ಸತ್ಯ ಏನು ಅಂತ ನನಗೆ ಗೊತ್ತಿದೆ. ಕಾಂಗ್ರೆಸ್‍ನ ಯಾವುದೇ ಮಾತಿಗೆ ಆಧಾರವಿಲ್ಲ. ಇವೆಲ್ಲ ರಾಜಕೀಯ ಪ್ರೇರಿತವಾದದ್ದು. ಕಾಂಗ್ರೆಸ್ ನವರ ಇಂತಹ ಹೇಳಿಕೆಗೆ ನಾನು ವಿಚಲಿತನಾಗುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

 

Share Post