DistrictsPolitics

ನಾವು ಸೇಡು ತೀರಿಸಿಕೊಂಡರೆ ಜೈಲುಗಳು ಸಾಕಾಗಲ್ಲ; ಲಕ್ಷ್ಮೀ ಹೆಬ್ಬಾಳ್ಕರ್

ಕಲಬುರಗಿ; ನಾವು ಸೇಡು ತೀರಿಸಿಕೊಳ್ಳಲು ಶುರು ಮಾಡಿದರೆ, ಬಿಜೆಪಿಯವರನ್ನು ಇಡಲು ಜೈಲುಗಳೇ ಸಾಕಾಗೋದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.. ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಬಂಧನದ ಹಿಂದೆ ಕಾಂಗ್ರೆಸ್‌ ಷಡ್ಯಂತ್ರ ಇದೆ ಎಂಬ ಆರೋಪಕ್ಕೆ ಈ ರೀತಿಯ ಉತ್ತರ ನೀಡಿದ್ದಾರೆ..
ಕಾಂಗ್ರೆಸ್‌ ಎಂದಿಗೂ ಸೇಡಿನ ರಾಜಕಾರಣ ಮಾಡೋದಿಲ್ಲ.. ಕಾಂಗ್ರೆಸ್‌ಗೆ ಷಡ್ಯಂತ್ರ ಮಾಡುವ ಅವಶ್ಯಕತೆಯೇ ಇಲ್ಲ.. ಬಿಜೆಪಿ ರೀತಿ ನಾವೇನಾದರೂ ಷಡ್ಯಂತ್ರ ಮಾಡಲು ಶುರು ಮಾಡಿದರೆ, ಅವರನ್ನು ಇಡೋದಕ್ಕೆ ಈಗ ಇರುವ ಜೈಲುಗಳು ಸಾಕಾಗೋದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ..
ರಾಜಕಾರಣಿಗಳು ನಮ್ಮ ಜವಾಬ್ದಾರಿಯನ್ನು ಅರಿತು ವರ್ತನೆ ಮಾಡಬೇಕು.. ಯಾಕಂದ್ರೆ ಜನ ನಮ್ಮನ್ನು ನೋಡಿ ಅನುಸರಿಸುತ್ತಾರೆ.. ಹೀಗಾಗಿ ನಮ್ಮ ಜವಾಬ್ದಾರಿ ಎಂದು ಅರಿತುಕೊಂಡು ಮಾತನಾಡಬೇಕಾಗುತ್ತದೆ.. ಯಾರಾದರೂ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವಾಗ ನಾಲಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ..

 

Share Post