BengaluruHealth

ಮೆಟ್ರೋ ಟ್ರ್ಯಾಕ್‌ಗೆ ಹಾರಿದ ವ್ಯಕ್ತಿ!; ಮುಂದೇನಾಯ್ತು..?

ಬೆಂಗಳೂರು; ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕೂಡಾ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ.. ಬೆಂಗಳೂರಿನಲ್ಲಿ ಈಗ ಇಂತಹದ್ದೇ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಆತ್ಮಹತ್ಯೆ ಮಾಡಿಕೊಳ್ಳಲು ಹೋದ ವ್ಯಕ್ತಿಯನ್ನು ರಕ್ಷಿಸಲಾಗಿದೆ..
ಇಂದು ಮಧ್ಯಾಹ್ನ 2.20ರ ಸುಮಾರಿಗೆ ನೇರಳೆ ಮಾರ್ಗದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.. 30 ವರ್ಷದ ಬಿಹಾರ ಮೂಲದ ಸಿದ್ಧಾರ್ಥ್‌ ಎಂಬ ವ್ಯಕ್ತಿ ಏಕಾಏಕಿ ರೈಲ್ವೆ ಟ್ರ್ಯಾಕ್‌ಗೆ ಹಾರಿದ್ದಾನೆ.. ಇದನ್ನು ನೋಡಿ ಮೆಟ್ರೋ ಸಿಬ್ಬಂದಿ ಕೂಡಲೇ ಆತನನ್ನು ರಕ್ಷಣೆ ಮಾಡಿದ್ದಾರೆ..
ಮೆಟ್ರೋ ರೈಲು ವೈಟ್‌ಫೀಲ್ಡ್‌ ಕಡೆಯಿಂದ ಕೆಂಗೇರಿ ಕಡೆಗೆ ಹೋಗುತ್ತಿತ್ತು.. ಈ ವೇಳೆ ಸಿದ್ಧಾರ್ಥ್‌ ಅದರಡಿಗೆ ಧುಮುಕಿದ್ದಾನೆ.. ಆದ್ರೆ ಆತ ಹಳಿ ನಡುವೆ ಸಿಲುಕಿದ ಕಾರಣ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.. ಲೋಕೋಪೈಲಟ್‌ ರೈಲಿನ ವೇಗವನ್ನು ಕೂಡಲೇ ಕಡಿಮೆ ಮಾಡಿದ್ದರಿಂದ ಅನಾಹುತ ತಪ್ಪಿದೆ..

Share Post