Politics

ರಾಜ್ಯದಲ್ಲಿ ನಿರೀಕ್ಷಿತ ಸ್ಥಾನ ಗೆಲ್ಲಲು ಆಗಲಿಲ್ಲ; ಸಿಎಂ ಸಿದ್ದರಾಮಯ್ಯ

ಬೆಂಗಳೂರು; ರಾಜ್ಯದಲ್ಲಿ ನಾವು ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಒಂದು ಸ್ಥಾನ ಗೆದ್ದಿದ್ದೆವು.. ಈ ಬಾರಿ 9 ಸ್ಥಾನ ಗೆದ್ದಿದ್ದೇನೆ ಎಂದು ಹೇಳಿದರು..ʼ

ನಾವು 18-20 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೆವು.. ಆದ್ರೆ ಅದು ಸಾಧ್ಯವಾಗಲಿಲ್ಲ.. ಆದ್ರೆ ವೋಟ್‌ ಶೇರ್‌ ನಮಗೆ 45.34 ಪರ್ಸೆಂಟ್‌ ಬಂದಿದೆ.. ಬಿಜೆಪಿಗೆ 46.04 ಪರ್ಸೆಂಟ್‌ ಬಂದಿದೆ… ಅಂದರೆ ವೋಟ್‌ ಶೇರ್‌ 1 ಪರ್ಸೆಂಟ್‌ಗಿಂತ ಕಡಿಮೆ ಬಂದಿದೆ.. ಹೀಗಾಗಿ ನಾವು ಹೆಚ್ಚಿನ ಸೀಟು ಗೆಲ್ಲದಿದ್ದರೂಹೆಚ್ಚಿನ ಮತದಾರರು ನಮ್ಮನ್ನು ಒಪ್ಪಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..

Share Post