BengaluruDistrictsPolitics

ಕೆರಗೋಡು ಹೋರಾಟದಲ್ಲಿ ಹೆಚ್ಡಿಕೆ ಕೇಸರಿ ಶಾಲು ಹಾಕಬಾರದಿತ್ತು; ಹೆಚ್‌.ಡಿ.ದೇವೇಗೌಡ

ಮಂಡ್ಯ; ಕೆರಗೋಡು ಗ್ರಾಮದಲ್ಲಿ ಅಧಿಕಾರಿಗಳು ಹನುಮ ಧ್ವಜ ಕೆಳಗಿಳಿಸಿದ್ದಕ್ಕೆ ಜೆಡಿಎಸ್‌ ಹಾಗೂ ಬಿಜೆಪಿ ಜಂಟಿಯಾಗಿ ಹೋರಾಟ ನಡೆಸಿತ್ತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿಯವರು ಕೇಸರಿ ಶಾಲು ಹಾಕಬಾರದಿತ್ತು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್‌.ಡಿ.ದೇವೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಅವರು, ಕುಮಾರಸ್ವಾಮಿಯವರು ಬಿಜೆಪಿಯವರ ಜೊತೆ ಸೇರಿ ಹೋರಾಟ ಮಾಡಿದರೂ, ನಮ್ಮ ಪಕ್ಷದ ಶಾಲನ್ನೇ ಹಾಕಬೇಕಾಗಿತ್ತು ಎಂದಿದ್ದಾರೆ.

ಅವರು ಅವರ ಶಾಲು ಹಾಕುತ್ತಾರೆ. ನಾವು ನಮ್ಮ ಶಾಲು ಹಾಕಿಕೊಂಡರೆ ಆಗಿತ್ತು. ಅದರ ಬದಲು ಕುಮಾರಸ್ವಾಮಿವರು ಕೇಸರಿ ಶಾಲು ಹಾಕಿದ್ದಾರೆ. ಅದು ಬೇಡವಾಗಿತ್ತು ಎಂದು ದೇವೇಗೌಡರು ಹೇಳಿದ್ದಾರೆ.

 

Share Post