Politics

ಸಂವಿಧಾನದ ನಿಲುವೇ ನಮ್ಮ ನಿಲುವು : ಡಿ ಕೆ ಶಿವಕುಮಾರ್‌

ಬೆಂಗಳೂರು : ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಕೈ ನಾಯಕರು ಪಟ್ಟು ಹಿಡಿದು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಈ ನಡುವೆ ಮಾತನಾಡಿರುವ ಡಿ ಕೆ ಶಿವಕುಮಾರ್‌ ಅವರು ಸಂವಿಧಾನದ ನಿಲುವೇ ನಮ್ಮ ನಿಲುವು ಎಂದು ಹೇಳಿದ್ದಾರೆ.

ಮಾಧ್ಯಮದ ಪ್ರತಿನಿಧಿ ನಿಮ್ಮ ನಿಲುವು ಹಿಜಾಬ್‌ ಪರ ಇದೆಯಾ ಎಂಬ ಪ್ರಶ್ನೆಗೆ ಡಿ ಕೆ ಶಿವಕುಮಾರ್‌ ಉತ್ತರಿಸಿದ್ದು ಸಂವಿಧಾನದ ನಿಲುವೇ ನಮ್ಮ ನಿಲುವು. ಸಂವಿಧಾನದಲ್ಲಿ ಏನಿದೆ ಅದಕ್ಕೆ ನಾವು ಗೌರವ ಕೊಡ್ತೀವಿ ಎಂದು ಹೇಳಿದ್ದಾರೆ.

ಇನ್ನು ಕೆ ಎಸ್‌ ಈಶ್ವರಪ್ಪನವರ ಬಗ್ಗೆ ಕೇಳಿದಕ್ಕೆ ಅವರು ನಮ್ಮ ಅಪ್ಪನನ್ನು ನೆನೆಸಿಕೊಂಡಿದ್ದಾರೆ, ಬಹುಶಃ ನಮ್ಮಪ್ಪನನ್ನು ಮೀಟ್‌ ಮಾಡ್ಬೇಕು ಅಂದುಕೊಂಡಿದ್ದಾರೆ. ಆದಷ್ಟು ಬೇಗ ಈ ವಿಷಯವನ್ನು ಸೆಟಲ್ಮೆಂಟ್‌ ಮಾಡ್ತೀನಿ ಎಂದು ಹೇಳಿದ್ದಾರೆ. ಈಶ್ವರಪ್ಪನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಅಲ್ಲಿಯವರೆಗೂ ತಮ್ಮ ಧರಣಿಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

 

Share Post