Politics

ಪ್ರಜ್ವಲ್ ವಿರುದ್ಧ ಕ್ರಮಕ್ಕೆ ನನ್ನ ತಕರಾರಿಲ್ಲ; ದೇವೇಗೌಡ

ಬೆಂಗಳೂರು; ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ನನ್ನ ಯಾವ ತಕರಾರೂ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. 92 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುಬ ದೇವೇಗೌಡರು ಇದೇ ಮೊದಲ‌ ಬಾರಿಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..
ರೇವಣ್ಣ ಅವರ ವಿರುದ್ಧದ ಪ್ರಕರಣ ಕೋರ್ಟ್ ಮುಂದೆ ಇದೆ.. ಹೀಗಾಗಿ ನಾನು ಅದರ ಬಗ್ಗೆ ಏನನ್ನೂ ಮಾತನಡುವುದಿಲ್ಲ.. ಕಾನೂನು ವ್ಯಾಪ್ತಿಯಲ್ಲಿ ಏನು ಕ್ರಮ ಆಗಬೇಕೋ ಅದು ಆಗಲಿ ಎಂದು ದೇವೇಗೌಡರು ಹೇಳಿದರು..
ಈ ಪ್ರಕರಣದಲ್ಲಿ ಅನೇಕ ಜನರಿದ್ದಾರೆ.. ಅವರ ಹೆಸರುಗಳನ್ನು ನಾನು ಹೇಳಲು ಹೋಗುವುದಿಲ್ಲ.. ಇದರಲ್ಲಿ ಯಾರ್ಯಾರಿದ್ದಾರೆ, ಅವರೆಲ್ಲರ ವಿರುದ್ಧ ಕ್ರಮ ಆಗಬೇಕು ಎಂದು ದೇವೆಗೌಡರು ಇದೇ ವೇಳೆ ಹೇಳಿದ್ದಾರೆ..
ರೇವಣ್ಣ ಅವರು ಏನು ಅನ್ನೋದು ಜನರಿಗೆ ಗೊತ್ತಿದೆ.. ಅವರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Share Post