Politics

ಅಂತೂ ಇಂತೂ ಸುವರ್ಣಸೌಧಕ್ಕೆ ಕಾಂಗ್ರೆಸ್‌ ನಾಯಕರ ಎಂಟ್ರಿ

ಬೆಳಗಾವಿ: ಸತತ ಒಂದುವರೆ ಗಂಟೆಗಳ ಬಳಿಕ ಸುವರ್ಣಸೌಧದ ಒಳಗೆ ಕಾಂಗ್ರೆಸ್‌ ನಾಯಕರ ಎಂಟ್ರಿಗೆ ಸಭಾಪತಿ ಅನುಮತಿ ನೀಡಿದ್ರು. ಕೇವಲ ಪರಿಷತ್‌ ಸದಸ್ಯರು ಮತ್ತು ಕೈ ಮುಖಂಡರಿಗಷ್ಟೇ ಅವಕಾಶ ನೀಡಿದ್ದು, ಟ್ರ್ಯಾಕ್ಟರ್‌ ಮೂಲಕವೇ ಗೇಟ್‌ ಒಳಗೆ ಕೈ ನಾಯಕರು ಎಂಟ್ರಿ ಕೊಟ್ಟಿದ್ದಾರೆ. ಶಾಸಕರು ಒಳಗೆ ಹೋಗ್ತಿದ್ದಂತೆ ಪೊಲೀಸರು ಗೇಟ್‌ ಹಾಕಿ ಭದ್ರತೆ ಮುಂದುವರೆಸಿದ್ದಾರೆ. ನಮ್ಮ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ರು.

 

Share Post