NationalPolitics

ಐಪಿಸಿ, ಸಿಆರ್‌ಪಿಸಿ ಸುಧಾರಣೆಗೆ ಹೊಸ ಕರಡು ಮಂಡನೆ; ಅಮಿತ್‌ ಶಾ

ಸೂರಜ್‌ಕುಂಡ್; ಐಪಿಸಿ ಹಾಗೂ ಸಿಆರ್‌ಪಿಸಿಗಳಲ್ಲಿ ಸುಧಾರಣೆ ತರಲು ಶೀಘ್ರವೇ ಸದನದಲ್ಲಿ ಹೊಸ ಕರಡು ಮಂಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಹರಿಯಾಣದ ಸೂರ್‌ಜ್‌ ಕುಂಡ್‌ನಲ್ಲಿ ಚಿಂತನ ಶಿಬಿರ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ ಸುಧಾರಿಸಬೇಕಿದೆ. ಅದಕ್ಕಾಗಿ ಹಲವು ತಜ್ಞರಿಂದ ಸಲಹೆಗಳನ್ನು ಸ್ವೀಕರಿಸಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅಮಿತ್‌ ಶಾ ಹೇಳಿದರು. ಎರಡೂ ಶಾಸನಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸದನದಲ್ಲಿ ಕರಡು ಮಂಡಿಸಲಾಗುವುದು ಎಂದೂ ಅಮಿತ್‌ ಶಾ ಹೇಳಿದ್ದಾರೆ.

Share Post