NationalPolitics

ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ ಉದ್ಧವ್‌

ಮುಂಬೈ; ಎನ್‌ಡಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಹುದೆಗೆ ಸ್ಪರ್ಧಿಸಿರುವ ದ್ರೌಪದಿ ಮುರ್ಮುಗೆ ಬೆಂಬಲ ಹೆಚ್ಚಾಗುತ್ತದೆ. ಉದ್ಧವ್‌ ಠಾಕ್ರೆ ಕೂಡಾ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ‘ಮಾತೋಶ್ರೀ’ ನಿವಾಸದಲ್ಲಿ ಶಿವಸೇನೆಯ ಸಂಸದರೊಂದಿಗೆ ಉದ್ಧವ್‌ ಠಾಕ್ರೆ ಸಮಾಲೋಚನೆ ನಡೆಸಿದರು. ಶಿವಸೇವೆಯ 18 ಸಂಸದರ ಪೈಕಿ 13 ಸಂಸದರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.  ಇದರಲ್ಲಿ ಬಹುತೇಕರು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನೇ ಬೆಂಬಲಿಸುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಧವ್‌  ಈ ನಿರ್ಧಾರ ಪ್ರಕಟಿಸಿದ್ದಾರೆ.

ಉದ್ಧವ್‌ ಠಾಕ್ರೆ ಆಪ್ತ ಹಾಗೂ ರಾಜ್ಯಸಬಾ ಸದಸ್ಯರಾದ ಸಂಜಯ್‌ ರಾವುತ್‌ ಅವರು ಯಶವಂತ ಸಿನ್ಹಾ ಅವರನ್ನು ಬೆಂಬಲಿಸುವಂತೆ ತಿಳಿಸಿದರು ಎನ್ನಲಾಗಿದೆ. ಆದ್ರೆ ಬಹುತೇಕ ಸಂಸದರು ದ್ರೌಪದಿ ಮುರ್ಮು ಪರವಾಗಿದ್ದರು. ಈ ಹಿನ್ನೆಲೆಯಲ್ಲಿ ಉದ್ಧವ್‌ ಠಾಕ್ರೆಯವರು ವಿಧಿಯಿಲ್ಲದೇ ದ್ರೌಪದಿ ಮುರ್ಮು ಅವರಿಗೇ ಬೆಂಬಲ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಯಶವಂತ ಸಿನ್ಹಾ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ.

Share Post