National

ಭದ್ರತಾ ಪಡೆ ಗುಂಡಿನ ದಾಳಿಗೆ ಇಬ್ಬರು ಉಗ್ರರು ಬಲಿ

ಶ್ರೀನಗರ: ಭದ್ರತಾ ಪಡೆ ಮತ್ತು ಉಗ್ರವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಜಮ್ಮುಕಾಶ್ಮೀರದ ಶ್ರೀನಗರ ಜಿಲ್ಲೆಯ ರಂಗ್ರೇತ್‌ ಪ್ರಾಂತ್ಯದಲ್ಲಿ ಉಗ್ರವಾದಿಗಳು ಇರುವ ವಿಷಯ ತಿಳಿದು ಭದ್ರತಾ ಪಡೆಗಳು ಪ್ರಾಂತ್ಯವನ್ನು ಸುತ್ತುವರೆದಿದ್ದಾರೆ. ಈ ವೇಳೆ ಶರಣಾಗುವಂತೆ ಉಗ್ರವಾದಿಗಳಿಗೆ ಭದ್ರತಾ ಪಡೆ ಸೂಚನೆ ಕೂಡ ನೀಡಿದೆ. ಆದರೆ ಸೈನಿಕರ ಮಾತನ್ನು ಧಿಕ್ಕರಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆ ಮತ್ತು ಉಗ್ರವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ. ಇನ್ನು ಮೃತ ಉಗ್ರವಾದಿಗಳು ಯಾವ ಸಂಸ್ಥೆಗೆ ಸೇರಿದವರೆಂದು ತಿಳಿದುಬಂದಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

Share Post