NationalPolitics

ಸಂಸತ್ತಿನಲ್ಲಿ ಭದ್ರತಾಲೋಪ; ವಿಪಕ್ಷಗಳಿಂದ ಪ್ರತಿಭಟನೆ, ಕಲಾಪ ಮುಂದೂಡಿಕೆ

ನವದೆಹಲಿ; ಸಂಸತ್ತಿನಲ್ಲಿ ನಿನ್ನೆ ಭದ್ರತಾ ಲೋಪ ಉಂಟಾಗಿದೆ. ಸಂಸದ ಪ್ರತಾಪ ಸಿಂಹ ನೀಡಿದ ಪಾಸ್‌ ಪಡೆದು ಪ್ರೇಕ್ಷಕರ ಗ್ಯಾಲರಿಗೆ ಬಂದಿದ್ದ ಇಬ್ಬರು ಯುವಕರು ಸದನದೊಳಗೆ ಪ್ರವೇಶಿಸಿ ಭದ್ರತಾಲೋಪ ಎಸಗಿದ್ದರು. ಈ ಸಂಬಂಧ ಇಂದು ಕಾಂಗ್ರೆಸ್‌ ಸೇರಿ ವಿಪಕ್ಷಗಳ ಕಲಾಪದಲ್ಲಿ ಪ್ರತಿಭಟನೆ ನಡೆಸಿವೆ. ಭದ್ರತಾಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಯುವಕರಿಗೆ ಪಾಸ್‌ ನೀಡಿದ ಸಂಸದ ಪ್ರತಾಪ ಸಿಂಹ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

Share Post