CrimeNational

ರಾಜೀವ್‌ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಆದೇಶ

ನವದೆಹಲಿ; ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನ್‌ ಶ್ರೀಹರನ್‌ ಹಾಗೂ ಆರ್‌.ಪಿ.ರವಿಚಂದ್ರನ್‌ ಸೇರಿ ಆರು ಮಂದಿಯನ್ನು ಅವಧಿಗೆ ಮೊದಲೇ ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್‌  ಮಹತ್ವದ ಆದೇಶ ನೀಡಿದೆ.

ಅಪರಾಧಿಗಳು ತಮ್ಮನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ, ಎ.ಜಿ.ಪೆರರಿವಳನ್‌ ಪ್ರಕರಣದಲ್ಲಿನ ಆದೇಶವೇ ಇವರಿಗೂ ಅನ್ವಯವಾಗುತ್ತೆ ಎಂದಿದ್ದಾರೆ.

ಸಂವಿಧಾನದ ವಿಧಿ 142ರ ಅಡಿಯಲ್ಲಿನ ತನ್ನ ಪರಮಾಧಿಕಾರ ಚಲಾಯಿಸಿರುವ ಸುಪ್ರೀಂಕೋರ್ಟ್‌, ಮೇ.18ರಂದು 30 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಪೆರರಿವಳನ್‌ ಅವರ ಬಿಡುಗಡೆಗೆ ಆದೇಶಿಸಿತ್ತು.

 

Share Post