National

ಮಾರ್ಚ್‌ 16ಕ್ಕೆ ಭಗವಂತ್‌ ಮಾನ್‌ ಪ್ರಮಾಣವಚನ; ಮಾರ್ಚ್‌ 13ಕ್ಕೆ ರೋಡ್‌ ಶೋ

ಅಮೃತಸರ: ಪಂಜಾಬ್‌ನಲ್ಲಿ ಎಎಪಿ ಪಕ್ಷ ಪ್ರಚಂಡ ಬಹುಮತ ಗಳಿಸಿದೆ. ಹೀಗಾಗಿ ಎಎಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿದ್ದು, ಮಾರ್ಚ್‌ 16 ರಂದು ಮುಖ್ಯಮಂತ್ರಿಯಾಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದೇ ಒಂದಷ್ಟು ಶಾಸಕರು ಭಗವಂತ್‌ ಮಾನ್‌ ಅವರ ಸಂಪುಟ ಸೇರಲಿದ್ದಾರೆ.

ಪ್ರಮಾಣವಚನ ಸಮಾರಂಭ ಹಿನ್ನೆಲೆಯಲ್ಲಿ ಭಗವಂತ್‌ ಮಾನ್‌ ಅವರು ಎಎಪಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್‌ ಅವರನ್ನು ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಇದರ ಜೊತೆಗೆ ಮನಿಷ್‌ ಸಿಸೋಡಿಯಾ ಸೇರಿ ಎಎಪಿಯ ಪ್ರಮುಖ ನಾಯಕರಿಗೂ ಆಹ್ವಾನ ನೀಡಲಾಗಿದೆ. ಇನ್ನು ಪಂಜಾಬ್‌ ಜನಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮಾರ್ಚ್‌ 13 ರಂದು ಅಮೃತಸರದಲ್ಲಿ ರೋಡ್‌ ಶೋ ನಡೆಸಲಾಗುತ್ತಿದೆ. ಇದರಲ್ಲಿ ಕೇಜ್ರಿವಾಲ್‌ ಕೂಡಾ ಪಾಲ್ಗೊಳ್ಳಲಿದ್ದಾರೆ.

Share Post