National

ಚರಣ್‌ಜೀತ್‌ ಸಿಂಗ್‌, ನವಜೋತ್‌ ಸಿಂಗ್‌ ಸಿಧುಗೆ ಹೀನಾಯ ಸೋಲು

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಮಕಾಡೆ ಮಲಗಿಬಿಟ್ಟಿದೆ. ಅದೂ ಯಾವ ಹಂತಕ್ಕೆ ಹೋಗಿದೆ ಅಂದ್ರೆ, ಕಾಂಗ್ರೆಸ್‌ ಪಕ್ಷ ರಾಜ್ಯಾಧ್ಯಕ್ಷರೇ ಸೋಲನುಭವಿಸಿದ್ದಾರೆ. ಜೊತೆಗೆ ಸಿಎಂ ಚರಣ್‌ ಜೀತ್‌ ಸಿಂಗ್‌ ಕೂಡಾ ಒಂದು ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ.

ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಜೋತ್‌ ಸಿಂಗ್‌ ಸಿಧು ಅವರು ಹೀನಾಯವಾಗಿ ಸೋಲನುಭವಿಸಿದ್ದಾರೆ. ಸಿಧು ಕೂಡಾ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರೇ ಸೋತಿದ್ದು, ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ನವಜೋತ್‌ ಸಿಂಗ್‌ ಸಿಧು, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಇದೆ.

ಇನ್ನು ಬದೌರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿಎಂ ಚರಣ್‌ ಜೀತ್‌ ಸಿಂಗ್‌ ಚನ್ನಿ ಅವರು ಸೋಲನುಭವಿಸಿದ್ದಾರೆ.

 

ನವಜೋತ್‌ ಸಿಂಗ್‌ ಸಿಧು ಅವರು
ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸೋಲು

Share Post