CrimeNational

ದಿಢೀರ್‌ ಯೂ ಟರ್ನ್‌ ಹೊಡೆದ ಟ್ರಕ್‌ ಚಾಲಕ; ಕಾರಿನಲ್ಲಿದ್ದ 6 ಮಂದಿ ದುರ್ಮರಣ!

ಜೈಪುರ; ರಾಜಸ್ಥಾನದ ಜೈಪುರದ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಟ್ರಕ್‌ ಚಾಲಕನ ಅಜಾರೂಕತೆಯಿಂದ ಈ ದುರಂತ ನಡೆದಿದೆ.. ರಾಜಸ್ಥಾನದ ಸವಾಯಿ-ಮಾಧೋಪುರ ಜಿಲ್ಲೆಯ ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ ವೇನಲ್ಲಿ ಈ ಘಟನೆ ನಡೆದಿದೆ..

ಹೆದ್ದಾರಿಯಲ್ಲಿ ಟ್ರಕ್‌ ಒಂದು ದಿಢೀರ್‌ ಯೂಟರ್ನ್‌ ತೆಗೆದುಕೊಂಡಿದೆ.. ಇದನ್ನು ನೋಡದ ಕಾರಿನ ಚಾಲಕ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾನೆ.. ಇದರಿಂದಾಗಿ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಡಿಕ್ಕಿಹೊಡೆದ ನಂತರವೂ ಟ್ರಕ್‌ ಚಾಲಕ ಅದನ್ನು ನಿಲ್ಲಿಸದೇ ಸ್ವಲ್ಪ ದೂರ ಮುಂದೆ ಹೋಗಿದ್ದಾನೆ.. ನಂತರ ಟ್ರಕ್‌ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ..

 

Share Post