NationalPolitics

ಖಾತೆ ನಿರ್ವಹಣೆಗೆ ಅವಕಾಶ ನೀಡಬೇಡಿ; ಕರೂರ್‌ ವೈಶ್ಯ ಬ್ಯಾಂಕ್‌ಗೆ ಪನ್ನೀರ್‌ ಸೆಲ್ವಂ ಪತ್ರ

ಚೆನ್ನೈ; ಎಐಎಡಿಎಂಕೆಯಿಂದ ನಿನ್ನೆ ಉಚ್ಚಾಟನೆಗೊಂಡಿರುವ ಒ.ಪನ್ನೀರ್‌ ಸೆಲ್ವಂ ಅವರು ಪಕ್ಷದ ಖಾತೆಗಳನ್ನು ಹೊಂದಿರುವ ಕರೂರ್‌ ವೈಶ್ಯ ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ. ನಾನು ಈಗಲೂ ಪಕ್ಷದ ಖಜಾಂಚಿ ಹಾಗೂ ಕೋ ಆರ್ಡಿನೇಟರ್‌ ಆಗಿದ್ದೇನೆ. ಹೀಗಾಗಿ, ಖಜಾಂಚಿ ಹೆಸರಲ್ಲಿ ಬೇರೆ ಯಾರೂ ವ್ಯವಹಾರ ನಡೆಸುವಂತಿಲ್ಲ. ಯಾರಿಗೂ ಇದಕ್ಕೆ ಅವಕಾಶ ನೀಡಬಾರದು ಎಂದು ಒಪಿಎಸ್‌ ಪತ್ರದಲ್ಲಿ ಬರೆದಿದ್ದಾರೆ.

ನಿನ್ನೆ ನಡೆದ ಎಐಎಡಿಎಂಕೆ ಸಭೆಯಲ್ಲಿ ಪನ್ನೀರ್‌ ಸೆಲ್ವಂ ಅವರನ್ನು ಎಲ್ಲಾ ಹುದ್ದೆಗಳಿಂದ ಬಿಡುಗಡೆಗೊಳಿಸಿ, ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಅನಂತರ ಪಕ್ಷದ ಖಜಾಂಚಿ ಹುದ್ದೆಗೆ ದಿಂಡಿಗಲ್‌ ಶ್ರೀನಿವಾಸ್‌ ಅವರನ್ನು ನೇಮಿಸಲಾಗಿತ್ತು. ಆದ್ರೆ ಪಕ್ಷದ ಖಾತೆಗಳನ್ನು ನಿರ್ವಹಿಸಲು ದಿಂಡಿಗಲ್‌ ಶ್ರೀನಿವಾಸ್‌ ಅವರಿಗೆ ಅನುಮತಿಸಬಾರದು ಎಂದು ಪನ್ನೀರ್‌ ಸೆಲ್ವಂ ಮನವಿ ಮಾಡಿದ್ದಾರೆ.

ಇನ್ನು ನಿನ್ನೆ ನಡೆದ ಘರ್ಷಣೆ ಸಂಬಂಧ ಪೊಲೀಸರು ನಲವತ್ತು ಮಂದಿಯ ವಿರುದ್ಧ ಕೇಸ್‌ ದಾಖಲಸಿಕೊಂಡಿದ್ದಾರೆ.

 

 

 

Share Post