Districts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಪತ್ತೆ

ಸುಳ್ಯ; ಹೊಳೆಗೆ ಕಾರು ಉರುಳಿಬಿದ್ದು ಮೂರು ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಮೃತದೇಹಗಳು ಇಂದು ಪತ್ತೆಯಾಗಿವೆ. ಕಾರು ನೀರಿಗೆ ಬಿದ್ದ ಸ್ಥಳದಿಂದ ಸುಮಾರು 250ಮೀ ದೂರದಲ್ಲಿ ಒಂದು ಮೃತದೇಹವನ್ನು ಸ್ಥಳೀಯರು ಮೊದಲು ನೋಡಿದ್ದು, ನಂತರದಲ್ಲಿ ಇನ್ನೊಂದು ಮೃತದೇಹ ಪತ್ತೆಯಾಗಿದೆ.

  ಸುಳ್ಯದ ಬೈತಡ್ಕ ಸೇತುವೆ ಬಳಿ ಮೂರು ದಿನದ ಹಿಂದೆ ಮಾರುತಿ 800 ಕಾರು ಅಪಘಾತಕ್ಕೀಡಾಗಿತ್ತು. ಸೇತುವೆ ಡಿಕ್ಕಿ ಹೊಡೆದ ನಂತರ ಅದು ಹಳ್ಳಕ್ಕೆ ಬಿದ್ದಿತ್ತು. ಕಾರು ಚಾಲಕ ಧನುಷ್‌ ಹಾಗೂ ಮತ್ತೊಬ್ಬ ಧನುಷ್‌ ಕಾಣೆಯಾಗಿದ್ದರು. ಕಾರನ್ನು ಅಂದೇ ಮೇಲೆತ್ತಲಾಗಿತ್ತು. ಆದ್ರೆ ಇಬ್ಬರೂ ನಾಪತ್ತೆಯಾಗಿದ್ದರು. ಮೂರು ದಿನಗಳ ಹಡುಕಾಟದ ನಂತರ ಎರಡೂ ಮೃತದೇಹಗಳು ಪತ್ತೆಯಾಗಿವೆ.

ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕ ದಳ ಹಾಗೂ ಸವಣೂರಿನ ನಾಲ್ವರು ಡೈವರ್‌ಗಳಿಂದ ಮೊದಲು ಶೋಧ ಕಾರ್ಯ ನಡೆಯಿತು. ಆದ್ರೆ ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ. ನಿನ್ನೆ ಮತ್ತೆ ಬೆಳಗ್ಗೆಯಿಂದ ಎಸ್.ಡಿ.ಆರ್.ಎಫ್ ತಂಡ ಬೆಳ್ಳಾರೆ, ಕಡಬ ಪೊಲೀಸರು, ಕಂದಾಯ ಅಧಿಕಾರಿಗಳು ನಾಪತ್ತೆಯಾದವರ ಹುಡುಕಾಟ ಆರಂಭಿಸಿದ್ದರು.

Share Post