National

ಪ್ರೀತಿಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ

ವರಂಗಲ್​(ತೆಲಂಗಾಣ): ಪ್ರೀತಿಸದ ಒಪ್ಪದ ಯುವತಿಗೆ ಭಗ್ನಪ್ರೇಮಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ವರಂಗಲ್​ ಜಿಲ್ಲೆಯ ಹನುಮಕೊಂಡ ಸಮೀಪದ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. ಇಪ್ಪತ್ಮೂರು ವರ್ಷದ ಅನುಷಾ ಎಂಬಾಕೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾಳೆ.

 

ಅಜರ್‌ ಎಂಬಾತ ಅನುಷಾಳನ್ನು ಪ್ರೀತಿ ಮಾಡುತ್ತಿದ್ದ. ಆದ್ರೆ ಅನುಷಾ ಪ್ರೀತಿಗೆ ಒಪ್ಪಿರಲಿಲ್ಲ. ಆದರೂ ಆತ ಆಕೆಯ ಹಿಂದೆ ಬಿದ್ದಿದ್ದ. ಇವತ್ತೂ ಕೂಡಾ ಅದೇ ರೀತಿ ಪೀಡಿಸಿದ್ದು, ಅದಕ್ಕೆ ಅನುಷಾ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಅಜರ್‌ ಚಾಕುವಿನಿಂದ ಅನುಷಾಗೆ ಇರಿದಿದ್ದಾನೆ.  ತೀವ್ರವಾಗಿ ಗಾಯಗೊಂಡಿರುವ ಅನುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Share Post