NationalPolitics

ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸುತ್ತಿದ್ದರಂತೆ!; ಇದೆಂಥಾ ಅಪಚಾರ..?

ತಿರುಪತಿ; ದೇಶದ ಶ್ರೀಮಂತ ದೇವರು ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದ ತುಂಬಾನೇ ಫೇಮಸ್‌.. ಲಡ್ಡುಗಾಗಿಯೇ ಭಕ್ತರು ಇಲ್ಲಿಗೆ ಹೋಗುತ್ತಾರೆ.. ಲಡ್ಡುಗಾಗಿ ಕ್ಯೂ ನಿಂತು ಖರೀದಿ ಮಾಡುತ್ತಾರೆ.. ಒಮ್ಮೊಮ್ಮೆ ಬ್ಲ್ಯಾಕ್‌ನಲ್ಲೂ ಲಡ್ಡು ಖರೀದಿಸಿ ತರುತ್ತಾರೆ.. ಆದ್ರೆ, ಈ ದೇವರ ಪ್ರಸಾದವಾದ ಫೇಮಸ್‌ ತಿರುಪತಿ ಲಡ್ಡುನಲ್ಲೂ ಕಲಬೆರಕೆಯಾದರೆ ಏನು ಕಥೆ.. ಇದನ್ನು ನಾವು ಹೇಳುತ್ತಿಲ್ಲ.. ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಆರೋಪ ಮಾಡಿದ್ದಾರೆ.. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದರು ಎಂದು ಅವರು ಆರೋಪ ಮಾಡಿದ್ದಾರೆ..
ಹಿಂದಿನ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ತುಪ್ಪ ಬಳಸದೇ ಪ್ರಾಣಿಗಳ ಕೊಬ್ಬನ್ನು ಬಳಸಿ ತಿರುಪತಿ ಲಡ್ಡು ತಯಾರು ಮಾಡುತ್ತಿದ್ದರು.. ಈಗ ನಾವು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಯತ್ನ ಮಾಡುತ್ತಿದ್ದೇವೆ.. ದೇವಾಲಯದ ಸಂಪ್ರದಾಯಗಳನ್ನು ಆಚರಿಸಲು ಕ್ರಮ ಕೈಗೊಳ್ಳಲಾಗಿದೆ. ದೇವಾಲಯವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತಿದ್ದೇನೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.. ಚಂದ್ರಬಾಬು ಅವರ ಈ ಆರೋಪವನ್ನು ವೈಎಸ್‌ಆರ್‌ಸಿಪಿ ಪಕ್ಷ ತಳ್ಳಿಹಾಕಿದೆ.. ಈ ಆರೋಪ ಆಧಾರದ ರಹಿತವಾಗಿ ದುರುದ್ದೇಶಪೂರಿತವಾಗಿದೆ ಎಂದು ವೈಎಸ್‌ಆರ್‌ಸಿಪಿ ನಾಯಕರು ಹೇಳಿದ್ದಾರೆ..
ಇನ್ನೊಂದೆಡೆ ಜಗನ್‌ ಸರ್ಕಾರದ ವೇಳೆ ಟಿಟಿಡಿ ಅಧ್ಯಕ್ಷರಾಗಿದ್ದ ವೈ.ವಿ.ಸುಬ್ಬಾರೆಡ್ಡಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ಇದು ಆಧಾರರಹಿತ ಆರೋಪ. ಕೋಟ್ಯಂತರ ಹಿಂದೂಗಳ ನಂಬಿಕೆಯ ಮೇಲೆ ಚಂದ್ರಬಾಬು ನಾಯ್ಡು ದಾಳಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ತಿರುಪತಿ; ದೇಶದ ಶ್ರೀಮಂತ ದೇವರು ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದ ತುಂಬಾನೇ ಫೇಮಸ್‌.. ಲಡ್ಡುಗಾಗಿಯೇ ಭಕ್ತರು ಇಲ್ಲಿಗೆ ಹೋಗುತ್ತಾರೆ.. ಲಡ್ಡುಗಾಗಿ ಕ್ಯೂ ನಿಂತು ಖರೀದಿ ಮಾಡುತ್ತಾರೆ.. ಒಮ್ಮೊಮ್ಮೆ ಬ್ಲ್ಯಾಕ್‌ನಲ್ಲೂ ಲಡ್ಡು ಖರೀದಿಸಿ ತರುತ್ತಾರೆ.. ಆದ್ರೆ, ಈ ದೇವರ ಪ್ರಸಾದವಾದ ಫೇಮಸ್‌ ತಿರುಪತಿ ಲಡ್ಡುನಲ್ಲೂ ಕಲಬೆರಕೆಯಾದರೆ ಏನು ಕಥೆ.. ಇದನ್ನು ನಾವು ಹೇಳುತ್ತಿಲ್ಲ.. ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಆರೋಪ ಮಾಡಿದ್ದಾರೆ.. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದರು ಎಂದು ಅವರು ಆರೋಪ ಮಾಡಿದ್ದಾರೆ..
ಹಿಂದಿನ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ತುಪ್ಪ ಬಳಸದೇ ಪ್ರಾಣಿಗಳ ಕೊಬ್ಬನ್ನು ಬಳಸಿ ತಿರುಪತಿ ಲಡ್ಡು ತಯಾರು ಮಾಡುತ್ತಿದ್ದರು.. ಈಗ ನಾವು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಯತ್ನ ಮಾಡುತ್ತಿದ್ದೇವೆ.. ದೇವಾಲಯದ ಸಂಪ್ರದಾಯಗಳನ್ನು ಆಚರಿಸಲು ಕ್ರಮ ಕೈಗೊಳ್ಳಲಾಗಿದೆ. ದೇವಾಲಯವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತಿದ್ದೇನೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.. ಚಂದ್ರಬಾಬು ಅವರ ಈ ಆರೋಪವನ್ನು ವೈಎಸ್‌ಆರ್‌ಸಿಪಿ ಪಕ್ಷ ತಳ್ಳಿಹಾಕಿದೆ.. ಈ ಆರೋಪ ಆಧಾರದ ರಹಿತವಾಗಿ ದುರುದ್ದೇಶಪೂರಿತವಾಗಿದೆ ಎಂದು ವೈಎಸ್‌ಆರ್‌ಸಿಪಿ ನಾಯಕರು ಹೇಳಿದ್ದಾರೆ..
ಇನ್ನೊಂದೆಡೆ ಜಗನ್‌ ಸರ್ಕಾರದ ವೇಳೆ ಟಿಟಿಡಿ ಅಧ್ಯಕ್ಷರಾಗಿದ್ದ ವೈ.ವಿ.ಸುಬ್ಬಾರೆಡ್ಡಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ಇದು ಆಧಾರರಹಿತ ಆರೋಪ. ಕೋಟ್ಯಂತರ ಹಿಂದೂಗಳ ನಂಬಿಕೆಯ ಮೇಲೆ ಚಂದ್ರಬಾಬು ನಾಯ್ಡು ದಾಳಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಹಿಂದಿನ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ತುಪ್ಪ ಬಳಸದೇ ಪ್ರಾಣಿಗಳ ಕೊಬ್ಬನ್ನು ಬಳಸಿ ತಿರುಪತಿ ಲಡ್ಡು ತಯಾರು ಮಾಡುತ್ತಿದ್ದರು.. ಈಗ ನಾವು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಯತ್ನ ಮಾಡುತ್ತಿದ್ದೇವೆ.. ದೇವಾಲಯದ ಸಂಪ್ರದಾಯಗಳನ್ನು ಆಚರಿಸಲು ಕ್ರಮ ಕೈಗೊಳ್ಳಲಾಗಿದೆ. ದೇವಾಲಯವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತಿದ್ದೇನೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.. ಚಂದ್ರಬಾಬು ಅವರ ಈ ಆರೋಪವನ್ನು ವೈಎಸ್‌ಆರ್‌ಸಿಪಿ ಪಕ್ಷ ತಳ್ಳಿಹಾಕಿದೆ.. ಈ ಆರೋಪ ಆಧಾರದ ರಹಿತವಾಗಿ ದುರುದ್ದೇಶಪೂರಿತವಾಗಿದೆ ಎಂದು ವೈಎಸ್‌ಆರ್‌ಸಿಪಿ ನಾಯಕರು ಹೇಳಿದ್ದಾರೆ..

Share Post