National

ಶ್ರೀನಗರದಲ್ಲಿ ಎಲ್‌ಇಟಿ ಕಮಾಂಡರ್‌ ಹತ್ಯೆ

ಶ್ರೀನಗರ: ಕಾಶ್ಮೀರದಲ್ಲಿ ಇಂದು ಉಗ್ರನ ಎನ್‌ಕೌಂಟರ್‌ ಆಗಿದೆ. ಅನಂತನಾಗ್‌ ಜಿಲ್ಲೆಯ ಸಿರಹ್ಮಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತೀಯ ಯೋಧರ ಗುಂಡಿಗೆ ಲಷ್ಕರ್‌–ಎ–ತೈಯಬಾದ (ಎಲ್‌ಇಟಿ) ಕಮಾಂಡರ್‌ ನಿಸಾರ್‌ ಅಹ್ಮದ್‌ ದಾರ್‌ ಬಲಿಯಾಗಿದ್ದಾರೆ. ಕುಲ್ಗಾಂ ಜಿಲ್ಲೆಯ ರೆಡ್ವಾನಿ ಬಾಲಾ ಪ್ರದೇಶದ ನಿವಾಸಿಯಾದ ನಿಸಾರ್‌ ದಾರ್‌, ಸಿರಹ್ಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಹಾಗೂ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾಪಡೆಗಳೂ ದಾಳಿ ನಡೆಸಿದ್ದು, ಎಲ್‌ಇಟಿ ಕಮಾಂಡರ್‌ ಹತ್ಯೆಯಾಗಿದ್ದಾನೆ. 2021ರಲ್ಲಿ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ನಿಸಾರ್ ದಾರ್‌, ಹಲವು ಅಪರಾಧ ಕೃತ್ಯ ಹಾಗೂ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅನಂತನಾಗ್‌ ಜಿಲ್ಲೆಯ ಕೆಲವೆಡೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Share Post