International

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ; ಗುಂಡಿನ ಮಳೆಗೆರೆದ ದುಷ್ಕರ್ಮಿ

ಟೊರೊಂಟೊ: ಕೆನಡಾ ಟೊರೆಂಟೋ ಸೆನೆಕಾ ಕಾಲೇಜಿನಲ್ಲಿ ಮಾರ್ಕೆಟಿಂಗ್‌ ಮ್ಯಾನೇಜ್ಮೆಂಟ್‌ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ದುಷ್ಕರ್ಮಿಯ ಗುಂಡಿಗೆ ಬಲಿಯಾಗಿದ್ದಾನೆ. ಇನ್ನೂ ಜನವರಿ 4ರಂದು ಕೆನಡಾಗೆ ತೆರಳಿದ್ದ ಕಾರ್ತೀಕ್‌ ವಾಸುದೇವ್‌ ದುಷ್ಕರ್ಮಿಯ ಗುಂಡಿಗೆ ಬಲಿಯಾದ ದುರ್ದೈವಿ. ಈ ಘಟನೆಗೆ  ಭಾರತದ ವಿದೇಶಾಂಗ ಸಚಿವ ಡಾ. ಎಸ್.​ ಜೈಶಂಕರ್​ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೊದಲ ಸೆಮಿಸ್ಟರ್‌ ಓದುತ್ತಿದ್ದ ಕಾರ್ತೀಕ್‌, ಸಂಜೆ ರೆಸ್ಟೋರೆಂಟ್​ವೊಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿದ್ದರು. ಮೊನ್ನೆ ಕಾಲೇಜ್​ ಮುಗಿದ ಬಳಿಕ ರೂಮ್​ಗೆ ತೆರಳಿದ್ದಾರೆ. ಏಪ್ರಿಲ್ 7 ರ ಸಂಜೆ ಕೆಲಸಕ್ಕೆ ತೆರಳಲು ಲೋಕಲ್​​ ಸಬ್​ವೇ ರೈಲ್ವೆ ಸ್ಟೇಷನ್​ನಲ್ಲಿ ನಿಂತಿದ್ದಾರೆ. ಈ ವೇಳೆ ದುಷ್ಕರ್ಮಿಯೊಬ್ಬ ತಾನು ತಂದಿದ್ದ ಗನ್​ನಿಂದ ಮನ ಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

Share Post