National

KSRTC ಟಿಕೆಟ್‌ ವಿತರಣ ಮಷೀನ್‌ ಸ್ಪೋಟ : ಸುಟ್ಟು ಹೋಯ್ತು ಕಂಡಕ್ಟರ್‌ ಕೈ

ತಿರುವನಂತಪುರಂ : KSRTC ಬಸ್‌ನ ಟಿಕೆಟ್‌ ವಿತರಣ ಯಂತ್ರ ಸುಟ್ಟು ಹೋದ ಘಟನೆ ಕೇರಳದಲ್ಲಿ ವರದಿಯಾಗಿದೆ. ಕೈಯಲ್ಲಿದ್ದ ಯಂತ್ರ ಸ್ಪೋಟಗೊಂಡ ಕಾರಣ ಕಂಡಕ್ಟರ್‌ ಕೈ ಕೂಡ ಸುಟ್ಟುಹೋಗಿದೆ.

ರಾಜ್ಯ ಸಾರಿಗೆ ನಿಗಮದಲ್ಲಿ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಎಂ.ಎಂ ಮೊಹಮ್ಮದ್‌ ಸ್ಪೋಟದಿಂದ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ಪೆರುಂಬೂರು ನಿವಾಸಿ ಆಗಿದ್ದಾರೆ. ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್‍ನ ನಿರ್ವಾಹಕರಾಗಿರುವ ಮೊಹಮ್ಮದ್‌ ಅವರು ವಿಶ್ರಾಂತಿ ಕೊಠಡಿಯಲ್ಲಿ ಇದ್ದಾಗ ಈ ಸ್ಪೋಟ ಸಂಭವಿಸಿದೆ.

ಮೊಹಮ್ಮದ್‌ ಅವರ ಕೈ ಮೇಲೆ ಸುಟ್ಟ ಗಾಯಗಳಾಗಿವೆ. ಬತ್ತೇರಿ ಡಿಪೋಗೆ ಸೇರಿದ ಯಂತ್ರ ಇದಾಗಿದ್ದು ಸಂಪೂರ್ಣವಾಗಿ ಸುಟ್ಟು ಕರುಕಲಾಗಿದ್ದು ಇದು ಮೈಕ್ರೋಎಫ್‍ಎಕ್ಸ್ ಕಂಪನಿಗೆ ಸೇರಿದೆ ಎಂದು ತಿಳಿದುಬಂದಿದೆ.

Share Post