CrimeNational

ಅಮರನಾಥ್‌ ಯಾತ್ರಿಗಳೇ ಟಾರ್ಗೆಟ್‌; ಇಬ್ಬರು ಉಗ್ರರ ಹತ್ಯೆ

ಶ್ರೀನಗರ; ಅಮರನಾಥ ಯಾತ್ರಿಗಳನ್ನು ಪಾಕಿಸ್ತಾನಿ ಉಗ್ರರು ಟಾರ್ಗೆಟ್‌ ಮಾಡಿದ್ದಾರೆ. ಉಗ್ರರು ಅಮರನಾಥ ಯಾತ್ರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಇದರ ಮಾಹಿತಿ ಆಧರಿಸಿ, ಭದ್ರತಾ ಪಡೆಗಳು ಕಳೆದ ರಾತ್ರಿ ದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಹತ್ಯೆಯಾದ ಉಗ್ರರಯ ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ. ಜೂನ್‌ 30ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ಇದನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ ನಲ್ಲಿ ಈ ಉಗ್ರರು ಹತರಾಗಿದ್ದು, ಓರ್ವ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ಕಾರ್ಯಾಚರಣೆಯ ಕುರಿತು ಟ್ವೀಟಿಸಿರುವ ಕಾಶ್ಮೀರ ವಲಯದ ಪೊಲೀಸರು, ಪಾಕಿಸ್ತಾನ ಮೂಲದ ಪಿತೂರಿಗಾರರು ಸ್ಥಳೀಯ ಉಗ್ರ ಆದಿಲ್‌ ಹುಸೇನ್‌ ಮಿರ್‌ ಜೊತೆಗೆ ಪಾಕಿಸ್ತಾನದ ಲಷ್ಕರ್‌–ಎ–ತಯಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಕಳುಹಿಸಿದ್ದರು. 2018ರಿಂದ ಪಾಕಿಸ್ತಾನದಲ್ಲಿದ್ದ ಆದಿಲ್‌ ಹುಸೇನ್‌ ಅನಂತ್‌ನಾಗ್‌ನ ಪಹಲ್‌ಗಾಮ್‌ ಮೂಲದವನು. ಮೂವರೂ ಉಗ್ರರು ಯಾತ್ರೆಯ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಎರಡು ಎಕೆ–47 ರೈಫಲ್‌ಗಳು, 10 ಮ್ಯಾಗಜೀನ್‌ಗಳು, ಲೈವ್‌ ರೌಂಡ್ಸ್‌ ಹಾಗೂ ವೈ–ಎಸ್‌ಎಂಎಸ್‌ ಸಾಧನ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share Post