CrimeNational

ಸಂಜಯ್‌ ಮನವಿಗೆ ಒಪ್ಪದ ಇಡಿ; ಜುಲೈ 1 ಕ್ಕೆ ಹಾಜರಾಗಲು ಸಮನ್ಸ್‌

ಮುಂಬೈ; ಶಿವಸೇನೆ ನಾಯಕ ಸಂಜಯ್‌ ರಾವುತ್‌ಗೆ ಇಡಿ ಅಧಿಕಾರಿಗಳು ಮತ್ತೊಂದು ಸಮನ್ಸ್‌ ಜಾರಿ ಮಾಡಿದ್ದಾರೆ. ಜುಲೈ 1 ರಂದು ವಿಚಾರಣೆಗೆ ಹಾಜರಾಗಲೇಬೇಕೆಂದು ಸೂಚನೆ ನೀಡಲಾಗಿದೆ. ಇಂದು ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚನೆ ನIಡಿದ್ದರು. ಆದ್ರೆ ರಾವುತ್‌ ಪರ ವಕೀಲರು, 13-14 ದಿನಗಳ ಕಾಲಾವಕಾಶ ಕೇಳಿದ್ದರು.

  ಇದಕ್ಕೆ ಒಪ್ಪದ ಇಡಿ ಅಧಿಕಾರಿಗಳು, ಜುಲೈ 1 ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದ್ದಾರೆ. ಪತ್ರಾಚಲ್ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್‌ ನೀಡಲಾಗಿದೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ದಾಖಲೆಗಳನ್ನು ತರುವಂತೆ ರಾವುತ್ ಅವರಿಗೆ​ ತಿಳಿಸಲಾಗಿದೆ.

Share Post