National

ರಾಷ್ಟ್ರ ರಾಜಧಾನಿವರೆಗೂ ಹಬ್ಬಿದ ಹಿಜಾಬ್‌ ಕಿಚ್ಚು, ವಿದ್ಯಾರ್ಥಿಗಳು ವಶಕ್ಕೆ

ದೆಹಲಿ: ರಾಜ್ಯದ ಹಿಜಾಬ್‌ ಕಿಚ್ಚು ದೆಹಲಿವರೆಗೂ ಹಬ್ಬಿದೆ. ದೆಹಲಿಯಲ್ಲಿ ಕೆಲ ವಿದ್ಯಾರ್ಥಿಗಳು ಪ್ರತುಭಟನೆ ನಡೆಸಿದ್ರು. ಈ ವೇಳೆ ಅವರನ್ನು ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ ಭವನದ ಬಳಿಗೆ ಬರುವ ಮೊದಲೇ ದೆಹಲಿಯಲ್ಲಿ ಕಾವೇರಿದ ಕಿಚ್ಚನ್ನು ಆರಿಸಲು ಪೊಲೀಸರು ಪಣ ತೊಟ್ಟಿದ್ದಾರೆ. ಹಿಜಾಬ್‌ ವಿವಾದದ ಬಗ್ಗೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದಿದ್ದಾರೆ. ಶಿಕ್ಷಣ ವಿದ್ಯಾರ್ಥಿಗಳ ಹಕ್ಕು. ಅದನ್ನು ನೀಡದೆ ಹೀಗೆ ಕಾಲೇಜಿನ ಆಚೆ ನಿಲ್ಲಿಸುವುದ ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದು ವಿದ್ಯಾರರ್ಥಿಗಳು ನ್ಯಾಯ ಬೇಕೆಂದು ದೆಹಲಿ ರಸ್ತೆಯಲ್ಲಿ ಪ್ರತಿಭಟನೆ ಮಾಡ್ತಿದ್ರು.

ಘೋಷಣೆ ಕೂಗುತ್ತಾ ಕರ್ನಾಟಕ ಭವನದ ಬಳಿಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರತಿಭಟನೆಗೆ ಆಸ್ಪದ ಕೊಡದೆ ಅವರನ್ನು ವಶಕ್ಕೆ ಪಡೆದು ಹೋರಾಟವನ್ನು ಹತ್ತಿಕ್ಕಿದ್ರು.

Share Post