National

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ನಂದಮೂರಿ ಬಾಲಕೃಷ್ಣ

ಹಿಂದೂಪುರ: ಹಿಂದೂಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಶಾಸಕ ನಂದಮೂರಿ ಬಾಲಕೃಷ್ಣ ಮೌನ ದೀಕ್ಷೆ ನಡೆಸಿದ್ದಾರೆ.  ಹಿಂದೂಪುರಕ್ಕಾಗಿ ನಾನು ಯಾವುದಕ್ಕಾದರೂ ಸಿದ್ಧ ಎಂದು ಘೋಷಿಸಿದ ಬಾಲಕೃಷ್ಣ, ಅಗತ್ಯ ಬಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ರು. ಬಾಲಕೃಷ್ಣಗೆ ವೈಸಿಪಿ ನಾಯಕರು ಸಾಥ್‌ ನೀಡಿದ್ದಾರೆ.

ಆಂಧ್ರಪ್ರದೇಶ ಹೊಸ ಜಿಲ್ಲೆಗಳ ರಚನೆಗೆ ತುದಿಗಾಲಲ್ಲಿ ನಿಂತಿದೆ. ರಾತ್ರೋರಾತ್ರಿ ಜಿಲ್ಲೆಗಳ ಹೆಸರು ಘೋಷಣೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.  ಹಿಂದೂಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದ್ರು. ಹಿಂದೂಪುರ ಆಧ್ಯಾತ್ಮಿಕ ವಿಷಯಗಳ ಕೇಂದ್ರವಾಗಿದ್ದು, ಆಧ್ಯಾತ್ಮದ ನೆಲೆಯಲ್ಲಿ ಜಿಲ್ಲಾ ಕೇಂದ್ರ ಸ್ಥಾಪನೆಯಾದರೆ ಧರಣಿ ನಡೆಸುವುದಿಲ್ಲ ಎಂದಿದ್ದಾರೆ.

ಆಧ್ಯಾತ್ಮಿಕ ಚಿಂತನೆಯಲ್ಲಿ ನನಗಿಂತ ತಿಳಿಸವರು ಯಾರಾದ್ರೂ ಇದ್ದಾರಾ..? ಎಂದು ಪ್ರಶ್ನಿಸಿದ್ದಾರೆ. ಹಿಂದೂಪುರಕ್ಕಾಗಿ  ನಿರಂತರ ಹೋರಾಟ ಮಾಡುವುದಾಗಿ ಬಾಲಕೃಷ್ಣ ಭರವಸೆ ನೀಡಿದರು. ಅಷ್ಟೇ ಅಲ್ಲ.. ಉದ್ಯೋಗದ ಹೋರಾಟದ ಗಮನವನ್ನು ಬೇರೆಡೆಗೆ ತಿರುಗಿಸಲು ಹೊಸ ಜಿಲ್ಲೆಗಳ ರಚನೆಯ ಘೋಷಣೆ ಮಾಡಲಾಗಿದೆ ಎಂದ್ರು.  ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಧರಣಿ ನಡೆಸುವುದು ಶತ ಸಿದ್ಧ ಎಂದಿದ್ದಾರೆ.

Share Post