National

ಮುಂಬೈ ರೈಲು ನಿಲ್ದಾಣದಲ್ಲಿ ಬಾಂಬ್‌ ಬೆದರಿಕೆ; ಕೆಲಕಾಲ ಆತಂಕ

ಮುಂಬೈ: ಇಲ್ಲಿನ ಸಿಎಸ್ಎಂಟಿ ಹಾಗೂ ಕುರ್ಲಾ ರೈಲು ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದು, ಎರಡೂ ನಿಲ್ದಾಣಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.  ಬಾಂಬ್‌ ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳ ಹಾಗೂ ಡಾಗ್‌ ಸ್ಕ್ವಾಡ್‌ನೊಂದಿಗೆ ಆಗಮಿಸಿ, ಎರಡೂ ನಿಲ್ದಾಣಗಳನ್ನು ಪರಿಶೀಲನೆ ನಡೆಸಿತು. ಆದರೆ,  ಯಾವುದೇ ಸ್ಫೋಟಕ ಕಂಡುಬರಲಿಲ್ಲ.

ಜಬಲ್ಪುರ ಮೂಲದ ವ್ಯಕ್ತಿ ಈ ಬೆದರಿಕೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೇಸ್‌ ದಾಖಲಿಸಿಕೊಂಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿ ಯಾಕೆ ಹೀಗೆ ಹುಸಿ ಬೆದರಿಕೆ ಕರೆ ಮಾಡಿದ ಎಂಬುದು ಗೊತ್ತಾಗಲಿಲ್ಲ. ಕರೆಯಿಂದಾಗಿ ಎರಡೂ ನಿಲ್ದಾಣಗಳಲ್ಲಿ ಪ್ರಯಾಣಿಕರು ಆತಂಕಗೊಂಡಿದ್ದರು. ಇನ್ನು ಒಂದೆರಡು ರೈಲುಗಳಲ್ಲಿ ತಪಸಾಣೆ ನಡೆಸಬೇಕಿದ್ದರಿಂದ, ರೈಲುಗಳ ಓಡಾಟದಲ್ಲೂ ವ್ಯತ್ಯಯವಾಯಿತು.

Share Post