National

ಪಂಜಾಬ್‌ನಲ್ಲಿ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್‌ಗೆ ಭರ್ಜರಿ ಜಯ

ಪಂಜಾಬ್:‌  ಆಪ್ ಮುಖ್ಯಮಂತ್ರಿ ಕ್ಯಾಂಡಿಡೇಟ್ ಭಗವಂತ ಮಾನ್‌ಗೆ  ಗೆಲುವು ಹೆಗಲೇರಿದೆ. ಬರೋಬ್ಬರಿ  45,000ಕ್ಕಿಂತ ಹೆಚ್ಚಿನ ಮೆಜಾರಿಟಿಯೊಂದಿಗೆ ಗೆಲುವು ಸಾಧಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ಭಗವಂತ್‌ ಮಾನ್‌ ದೆಹಲಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿಯಾಗಿ ಭಗತ್‌ಸಿಂಗ್‌ ಹುಟ್ಟೂರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವುದಾಗಿ ಭಗವಂತ್‌ ಮಾನ್‌ ಘೋಷಣೆ ಕೂಡಾ ಮಾಡಿದ್ದಾರೆ. ಭಗತ್‌ಸಿಂಗ ಪೂರ್ವಜರ ಗ್ರಾಮದಲ್ಲಿ ಪ್ರಮಾಣವಚನ ಸ್ವೀಕರಿಸಿಲು ಭಗವಂತ್‌ ಮಾನ್‌ ತೀರ್ಮಾನ ಮಾಡಿದ್ದಾರೆ. ಪಂಜಾಬ್‌ನ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಭಗತ್‌ ಸಿಂಗ್‌ ಹಾಗೂ ಅಂಬೇಡ್ಕರ್‌ ಭಾವಚಿತ್ರ ಇರಬೇಕೆಂದು ಭಗವಂತ್‌ ಮಾನ್‌ ಘೋಷಣೆ ಮಾಡಿದ್ದಾರೆ.

ಇನ್ನೂ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮಕಾಡೆ ಮಲಗಿದೆ, ನವಜೋತ್‌ ಸಿಂಗ್‌ ಸಿಧು ಹಾಗೂ ಚರಣ್‌ ಜಿತ್‌ ಸಿಂಗ್‌ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಊಹಿಸದ ರೀತಿಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನ್ನು ಅನುಭವಿಸಿದೆ.

Share Post