NationalPolitics

ಲೋಕಸಭೆಯಲ್ಲಿ ಭದ್ರತಾಲೋಪ ಹಿನ್ನೆಲೆ; ವೀಕ್ಷಕ ಪಾಸ್‌ ನಿಷೇಧಿಸಿದ ಸ್ಪೀಕರ್‌

ನವದೆಹಲಿ; ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಲೋಕಸಭೆ ಪ್ರವೇಶಿಸಿದ್ದರಿಂದ ಭದ್ರತಾ ಲೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ವೀಕ್ಷಕರ ಪಾಸ್‌ ನಿಷೇಧಿಸಿ ಆದೇಶ ಹೊರಡಿಸಿದ್ದು, ಪ್ರಕರಣದ ತನಿಖೆಗೂ ಸೂಚನೆ ಕೊಟ್ಟಿದ್ದಾರೆ. 

ಮಧ್ಯಾಹ್ನ ಪ್ರೇಕ್ಷಕರ ಗ್ಯಾಲರಿಯಿಂದ ಕಲಾಪಕ್ಕೆ ನುಗ್ಗಿದ ಇಬ್ಬರು ಯುವಕರು ಸ್ಮೋಕ್‌ ಕ್ರ್ಯಾಕರ್‌ ಸಿಡಿಸಿದ್ದರು. ಇದರಿಂದ ಕೆಲಕಾಲ ಆತಂಕಕ್ಕೆ ಕಾರಣರಾಗಿದ್ದರು. ಇದಾದ ಮೇಲೆ ಕೆಲಕಾಲ ಲೋಕಸಭಾ ಕಲಾಪ ಮುಂದೂಡಲಾಗಿತ್ತು. ಅನಂತರ ಕಲಾಪ ಶುರುವಾದ ಮೇಲೆ ಓಂ ಬಿರ್ಲಾ ಅವರು ಈ ಆದೇಶ ಹೊರಡಿಸಿದ್ದಾರೆ.

 

Share Post