National

ಹಾರಾಟದ ವೇಳೆ ಎಂಜಿನ್‌ ಆಫ್‌; ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಏನಾಯ್ತು..?

ನವದೆಹಲಿ; ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದ ಎಂಜಿನ್‌ ಇದ್ದಕ್ಕಿದ್ದಂತೆ ಆಫ್‌ ಆಗಿ ಅವಾಂತರ ಸೃಷ್ಟಿಸಿದೆ. ವಿಮಾನ ಮುಂಬೈ ನಿಲ್ದಾಣದಿಂದ ಟೇಕಾಫ್‌ ಆದ ಕೇವಲ 27 ನಿಮಿಷದಲ್ಲಿ ಎಂಜಿನ್‌ ಆಫ್‌ ಆಗಿದೆ. ಹೀಗಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದ್ರೆ ಫೈಲಟ್‌ ಮರಳಿ ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಭು ಸ್ಪರ್ಶ ಮಾಡಿಸಿದ್ದಾರೆ. 

  ನಿನ್ನೆ ಬೆಳಗ್ಗೆ 9.43ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಎ-320ನಿಯೋ ಏರ್​ ಇಂಡಿಯಾ ವಿಮಾನ ಟೇಕ್​ ಆಫ್​ ಆಗಿತ್ತು. ಆದರೆ, ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಎಂಜಿನ್​ ಆಫ್‌ ಆಗಿದೆ. ಇದರಿಂದ ಎಚ್ಚೆತ್ತ ಪೈಲಟ್​​ ಮರಳಿ ಮುಂಬೈ ಏರ್​ಪೋರ್ಟ್​ನಲ್ಲೇ 10.10 ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.

ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆ ತರಲಾಗಿದೆ.  ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ತನಿಖೆಗೆ ಆದೇಶಿಸಿದೆ.

Share Post