National

ಆದಿತ್ಯ ಠಾಕ್ರೆ ಬೆಂಗಾವಲು ವಾಹನಗಳ ಸರಣಿ ಅಪಘಾತ

ಮುಂಬೈ: ಮಹಾರಾಷ್ಟ್ರದ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಬೆಂಗಾವಲು ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ. ಸಚಿವ ಆದಿತ್ಯ ಠಾಕ್ರೆಯವರು ಕೊಂಕಣ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಎರಡು ವಾಹನಗಳು ಜಖಂಗೊಂಡಿವೆ. ಆದ್ರೆ ವಾಹನಗಳಲ್ಲಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಆದಿತ್ಯ ಠಾಕ್ರೆ ಕೊಂಕಣ ಪ್ರವಾಸದಲ್ಲಿದ್ದು ಸಿಂಧುದುರ್ಗದಿಂದ ರತ್ನಗಿರಿಗೆ ಹೋಗುತ್ತಿದ್ದರು. ಅವರು ಖರೆ ಪಟಾನ್ ಗ್ರಾಮದ ಬಳಿ ಬಂದಾಗ ಈ ಅಪಘಾತ ಸಂಭವಿಸಿದೆ. ಆದಿತ್ಯ ಅವರ ಬೆಂಗಾವಲಿಗಿದ್ದ ಮೂರು ಕಾರುಗಳು ಅತಿವೇಗದಲ್ಲಿ ಚಲಿಸುತ್ತಿದ್ದವು. ಈ ವೇಳೆ ಒಂದು ಕಾರಿನ ಚಾಲಕ ಅಡನ್‌ ಬ್ರೇಕ್‌ ಹಾಕಿದ್ದರಿಂದ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಸಚಿವ ಆದಿತ್ಯ ಠಾಕ್ರೆ ಸೇರಿದಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

 

 

Share Post