National

ರಾಮಲೀಲಾ ನಾಟಕದ ವೇಳೆ ಹನುಮಾನ್ ಪಾತ್ರದಾರಿ ಹೃದಯಾಘಾತಕ್ಕೆ ಬಲಿ

ಹರಿಯಾಣ; ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಮಲೀಲಾ ನಾಟಕ ಪ್ರದರ್ಶನ ವೇಳೆ ಆಂಜನೇಯ ಪಾತ್ರಧಾರಿ ವೇದಿಕೆ ಮೇಲೆಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಹರ್ಯಾಣದ ಭಿವಾನಿಯಲ್ಲಿ ಈ ದುರ್ಘಟನೆ ನಡೆದಿದೆ.

  ಹರೀಶ್ ಮೆಹ್ತಾ ಎಂಬ ಹನುಮಾನ್ ಪಾತ್ರಧಾರಿಯೇ ಹೃದಯಾಘಾತಕ್ಕೆ ಬಲಿಯಾದವರು. ಭಿವಾನಿಯ ಜವಾಹರ್ ಚೌಕ್ ಪ್ರದೇಶದಲ್ಲಿ ರಾಮ ತಿಲಕ್ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ರಾಮಲೀಲಾ ಎಂಬ ನಾಟಕ ಪ್ರದರ್ಶನ ಮಾಡಲಾಗಿತ್ತು.

 

 ಹಾಡಿನ ಮೂಲಕ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆ ಶುರುವಾಗಿತ್ತು. ಹಾಡಿನ ಮುಕ್ತಾಯದ ನಂತರ, ಹರೀಶ್ ಮೆಹ್ತಾ, ಹನುಮಾನ್ ಪಾತ್ರದಲ್ಲಿ, ಭಗವಾನ್ ರಾಮನ ಪಾದಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕಿತ್ತು. ಹರೀಶ್ ರಾಮನ ಪಾದಗಳಿಗೆ ನಮಸ್ಕರಿಸುತ್ತಿದ್ದಂತೆ, ಇದ್ದಕ್ಕಿದ್ದಂತೆ ಕುಸಿದುಬಿದ್ದರು.

 

Share Post