NationalPolitics

ಲೋಕಸಭೆಯಲ್ಲಿ ವಿಪಕ್ಷಗಳ‌ ಗದ್ದಲ; 9 ಸಂಸದರ ಅಮಾನತು

ನವದೆಹಲಿ; ನಿನ್ನೆ ಲೋಕಸಭೆ ಭದ್ರತಾಲೋಪ ಉಂಟಾದ ಹಿನ್ನೆಲೆಯಲ್ಲಿ ವಿಪಕ್ಷಗಳು ಸದನದ ಬಾವಿಗಿಳಿದು ಹೋರಾಟ ನಡೆಸಿದವು. ಈ ಹಿನ್ನೆಲೆಯಲ್ಲಿ 13 ಸಂಸದರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.

ಇದರಲ್ಲಿ 9 ಕಾಂಗ್ರೆಸ್ ಸಂಸದರೂ ಸೇರಿದ್ದಾರೆ. ಟಿ.ಎನ್ .ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್​ನ 9 ಸಂಸದರು, ಡಿಎಂಕೆಯ ಇಬ್ಬರು ಸಂಸದರು, ಸಿಪಿಎಂನ ಇಬ್ಬರು ಸಂಸದರು, ಸಿಪಿಐನ ಓರ್ವ, ಟಿಎಂಸಿಯ ಓರ್ವ ಸಂಸದರು ಅಮಾನತುಗೊಂಡಿದ್ದಾರೆ.

Share Post