LifestyleNational

ಜೆಸಿಬಿ ಮೇಲೆ ಮೆರವಣಿಗೆ ಬಂದ ಮದುಮಗ!

ಖಲೀಲಾಬಾದ್; ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಅಭಿಮಾನಿಯೊಬ್ಬ ಮದುವೆಯಾಗಿದ್ದು, ವಿಭಿನ್ನವಾಗಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾನೆ.. ಉತ್ತರಪ್ರದೇಶದ ಖಲೀಲಾಬಾದ್ ನಲ್ಲಿ ಜೆಸಿಬಿ ಯಲ್ಲಿ ಮದುವೆ ಮಂಟಪಕ್ಕೆ ಬರುವ ಮೂಲಕ ವರ ಗಮನ ಸೆಳೆದಿದ್ದಾನೆ..

  ಬಿಜೆಪಿ ಕಾರ್ಯಕರ್ತನಾಗಿರುವ ಕೃಷ್ಣ ವರ್ಮಾ ಎಂಬುವವರೇ ವಿಶೇಷವಾಗಿ ಮದುವೆ ಮಂಟಪಕ್ಕೆ ಬಂದವರು.. ಕೃಷ್ಣ ವರ್ಮಾ ಅವರು ಯೋಗಿಆದಿತ್ಯನಾಥ ಅಭಿಮಾನಿ. ಹೀಗಾಗಿ ಜೆಸಿಬಿ ಯಲ್ಲಿ ಮೆರವಣಿಗೆ ಬಂದಿದ್ದಾನೆ.

  ಗೋರಖ್‌ಪುರದ ಖಜ್ನಿ ತೆಹಸೀಲಿನಲ್ಲಿ ಈ ಮದುವೆ ನಡೆದಿದೆ. ಇಲ್ಲಿ ಮಾಮೂಲಿಯಾಗಿ ವರ ಕುದುರೆ ಮೇಲೆ ಬರುತ್ತಾನೆ. ಆದ್ರೆ ಇವರು ಜೆಸಿಬಿ ಮೇಲೆ ಬಂದಿದ್ದಾನೆ.

 

Share Post