BengaluruLifestyle

ನಿನ್ನ ಪಡೆಯೋಕೆ ಪುಣ್ಯ ಮಾಡಿದ್ದೆ ಎಂದ ಪವಿತ್ರಾಗೌಡ ಪುತ್ರಿ!

ಬೆಂಗಳೂರು; ಒಂದು ಕಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.. ಇನ್ನೊಂದು ಕಡೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಬೇಲ್‌ ಅರ್ಜಿಯನ್ನು ಕೋರ್ಟ್‌ ರಿಜೆಕ್ಟ್‌ ಮಾಡಿದೆ.. ಇದರ ಬೆನ್ನಲ್ಲೇ ಪವಿತ್ರಾಗೌಡ ಪುತ್ರಿ ಭಾವುಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ.. ತಾಯಿಯಾಗಿ ನಿನ್ನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ ಅಮ್ಮ ಎಂದು ಖುಷಿ ಗೌಡ ಬರೆದುಕೊಂಡಿದ್ದಾಳೆ..
ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಖುಷಿ ಗೌಡ, ಎಂತಹದ್ದೇ ಸಂದರ್ಭದಲ್ಲಾದರೂ ಅಮ್ಮ ನನಗೆ ಸಹಾಯವಾಗಿ ನಿಲ್ಲುತ್ತಾಳೆ.. ಈಗಲೂ ಆಕೆ ನನ್ನ ಜೊತೆಗೆ ಇದ್ದಾಳೆ.. ನನಗೆ ಆಕೆ ಬೆಸ್ಟ್‌ ಅಮ್ಮ ಎಂದು ಹೇಳಿಕೊಂಡಿದ್ದಾಳೆ.. ತಾಯಿ ಜೈಲಿನಲ್ಲಿರುವುದರಿಂದ ಪವಿತ್ರಾಗೌಡ ಶುರು ಮಾಡಿರುವ ರೆಡ್‌ ಕಾರ್ಪೆಟ್‌ 777 ಡಿಸೈನರ್ ಸ್ಟುಡಿಯೋವನ್ನು ಪುತ್ರಿ ಖುಷಿ ಗೌಡ ನಡೆಸುತ್ತಿದ್ದಾಲೆ.. ಹಬ್ಬಕ್ಕಾಗಿ ಬಂಪರ್‌ ಆಫರ್‌ಗಳನ್ನೂ ಘೋಷಣೆ ಮಾಡಲಾಗಿದೆ..

Share Post