LifestyleNational

ಗಣೇಶನಿಗೆ 20 ಕೆಜಿ ಚಿನ್ನದ ಕಿರೀಟ ಸಮರ್ಪಿಸಿದ ಅನಂತ್‌ ಅಂಬಾನಿ!

ಮುಂಬೈ; 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಂಡ ಮುಖೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಮದುವೆಯಾದ ಮೇಲೆ ಮೊದಲ ಗಣೇಶ ಚತುರ್ಥಿ ಆಚರಿಸಿಕೊಳ್ಳುತ್ತಿದ್ದಾರೆ.. ಅವರು ಈ ಬಾರಿ ಮುಂಬೈನ ಗಣೇಶನಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.. ಅನಂತ್‌ ಅಂಬಾನಿಯವರು ವಿನಾಯಕನಿಗೆ ಬರೋಬ್ಬರಿ 20 ಕೆಜಿ ತೂಕದ ಚಿನ್ನದ ಕಿರೀಟ ಸಮರ್ಪಣೆ ಮಾಡಿದ್ದಾರೆ..
ಮುಂಬೈನಲ್ಲಿ ಗಣೇಶ ಉತ್ಸವ ತುಂಬಾನೇ ಫೇಮಸ್‌.. ಈ ಉತ್ಸವದಲ್ಲಿ ಬಾಲಿವುಡ್‌ ಮಂದಿ ಎಲ್ಲಾ ಪಾಲ್ಗೊಳ್ಳುತ್ತಾರೆ.. ಅಂಬಾನಿ ಫ್ಯಾಮಿಲಿ ಕೂಡಾ ಈ ವಿಜೃಂಬಣೆಯ ಉತ್ಸವದಲ್ಲಿ ಪಾಲ್ಗೊಳ್ಳುತ್ತದೆ.. ಈ ಬಾರಿ ನಝೂತನ ಜೋಡಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ..
ಈ ಬಾರಿಯ ವಿಶೇಷವೆಂದರೆ ಲಾಲ್‌ಬಾಗ್ಚಾ ರಾಜಾ ಗಣಪತಿ ವಿಗ್ರಹಕ್ಕೆ ಚಿನ್ನದ ಕಿರೀಟವನ್ನು ಅನಂತ್ ಅಂಬಾನಿ ನೀಡಿದ್ದಾರೆ.. ಈ ಕಿರೀಟ ಬರೋಬ್ಬರಿ 20 ಕೆಜಿ ಬಂಗಾರದ್ದಾಗಿದೆ.. ಇದಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.. ಇದನ್ನು ಈಗ ಗಣೇಶ ಮೂರ್ತಿಗೆ ತೊಡಿಸಲಾಗಿದೆ..

Share Post