International

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಇಂದು ಹೊಸ ಸಂಪುಟ ರಚನೆ..?

ಕೊಲಂಬೊ: ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಜನ ಪ್ರತಿಭಟನೆ ಶುರು ಮಾಡಿರುವುದರಿಂದ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಏರಲಾಗಿದೆ. ಈ ನಡುವೆ ಶ್ರೀಲಂಕಾ ಸರ್ಕಾರದ ಎಲ್ಲಾ ಸಚಿವರೂ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹೊಸ ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿನ್ನೆ ರಾತ್ರಿಯೇ ಶ್ರೀಲಂಕಾ ಸರ್ಕಾರದ ಎಲ್ಲಾ 26 ಸಚಿವರೂ ಸಾಮೂಹಿಕ ರಾಜೀನಾಮೆ ನೀಡಿದ್ದರು. ಇಂಧನ ಆಮದುಗಳಿಗೆ ಪಾವತಿಸಲು ವಿದೇಶಿ ಕರೆನ್ಸಿಯ ಕೊರತೆಯಿಂದಾಗಿ ಶ್ರೀಲಂಕಾದಲ್ಲಿ ಈ ಸಂಕಷ್ಟ ತಲೆದೋರಿದೆ. ಜನರು ಇಂಧನ, ಅಡುಗೆ ಅನಿಲ ಸಿಗದೆ ಪರದಾಡುತ್ತಿದ್ದಾರೆ. ಶ್ರೀಲಂಕಾಗೆ ಹಲವು ದೇಶಗಳು ಆರ್ಥಿಕ ನೆರವು ನೀಡಿದ್ದರೂ, ಆರ್ಥಿಕ ಬಿಕ್ಕಟ್ಟು ಮಾತ್ರ ಸುಧಾರಿಸುತ್ತಿಲ್ಲ. ಹೀಗಾಗಿ, ಪಕ್ಷ ಭೇದವಿಲ್ಲದೆ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

Share Post