International

ಹಿಜಾಬ್‌ ವಿಚಾರದಲ್ಲಿ ಮೂಗು ತೂರಿಸಿದ ಪಾಕ್:ಭಾರತದಿಂದ ಖಡಕ್‌ ಸಂದೇಶ ರವಾನೆ

ಪಾಕಿಸ್ತಾನ:(Pakistan) ರಾಜ್ಯದಲ್ಲಿ ತಲೆದೋರಿರುವ ಹಿಜಾಬ್‌ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ದದು ಮಾಡುತ್ತಿದೆ. ಭಾರತ ಅಂದ್ರೆ ಸಾಕು ಸದಾ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ಕೂಡ ಇದರಲ್ಲಿ ಮೂಗು ತೂರಿಸಿದೆ. ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿದಂತೆ ಬಾರತದ ಪಾಕ್‌ ರಾಯಭಾರಿಗೆ ಸಮನ್ಸ್‌ ನೀಡಿದೆ. ಹಿಜಾಬ್‌ ವಿವಾದದ ಬಗ್ಗೆ ರಾಯಭಾರಿಗೆ ಸಮನ್ಸ್‌ ನೀಡಿದೆ.

ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ಬರುವಂತೆ ಸಮನ್ಸ್‌ ಹೊರಡಿಸಿದೆ. ಅದರಲ್ಲಿ ಮುಸ್ಲಿಮರ ವಿರುದ್ಧ ತಾಋತಮ್ಯ ನೀತಿ ಎಂದು ಪಾಕ್‌ ಸರ್ಕಾರ ಹೇಳಿಕೆ ನೀಡಿದೆ. ಪಾಕಿಸ್ತಾನದ ಈ ದುರುದ್ಧೇಶದ ಕ್ರಮಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಘನತೆಗೆ ಧಕ್ಕೆ ತರಲು ಪಾಕ್‌ನಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪ ಮಾಡಿದೆ.

Share Post