International

NAVEEN DEATH: 4000 ಭಾರತೀಯರ ಸಾವಿಗಾಗಿ ಕಾಯುತ್ತಿದ್ದೀರಾ..?; ವಿದ್ಯಾರ್ಥಿನಿ ಪೂಜಾ ಆಕ್ರೋಶದ ಟ್ವೀಟ್‌

ಖಾರ್ಕೀವ್‌: ಉಕ್ರೇನ್‌ನ ಖಾರ್ಕೀವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್‌ ಸಾವಿಗೆ ವಿದ್ಯಾರ್ಥಿನಿ ಪೂಜಾ ಪ್ರಹರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾರ್ಕೀವ್‌ನಲ್ಲೇ ಇರುವ ವಿದ್ಯಾರ್ಥಿನಿ ಪೂಜಾ ಪ್ರಹರಾಜ್‌ ಅವರು, ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಕಳೆದ ಆರು ದಿನಗಳಿಂದ ನಾವು ಭಾರತ ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದೇವೆ. ಪ್ರಧಾನಿ ಕಾರ್ಯಾಲಯ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡುತ್ತಿದ್ದೇವೆ. ನಮ್ಮ ನೆರವಿಗೆ ಬನ್ನಿ ಎಂದು. ಆದ್ರೆ ಇದುವರೆಗೂ ಒಂದು ಸಣ್ಣ ಬೆಳವಣಿಗೆಯೂ ಆಗಿಲ್ಲ. ಇಂದು ಒಬ್ಬರು ಸತ್ತಿದ್ದಾರೆ. ನಾಳೆ ಅದು ನೂರು ಆಗಬಹುದು. ನಾಡಿದ್ದು ಸಾವಿರಕ್ಕೆ ಮುಟ್ಟಬಹುದು. ನೀವು ಇಲ್ಲಿನ ನಾಲ್ಕು ಸಾವಿರ ಭಾರತೀಯರ ದೇಹಗಳನ್ನು ಕೊಂಡೊಯ್ಯಲು ಕಾಯುತ್ತಿದ್ದೀರಾ..?

 

ಹೀಗಂತ ವಿದ್ಯಾರ್ಥಿನಿ ಪೂಜಾ ಪ್ರಹರಾಜ್‌ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ನಮಗೆ ಸಹಾಯ ಮಾಡಿ ಎಂದು ಬಾಲಿವುಡ್‌ ನಟ ಸೋನು ಸೂದ್‌ ಗೆ ಮನವಿ ಮಾಡಿದ್ದಾರೆ.

Share Post