Health

ಯುವಕರಲ್ಲಿ ಹೃದಯಾಘಾತ ಹೆಚ್ಚಾಗಲು ಇದೇ ಕಾರಣವಂತೆ!

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ವೈದ್ಯರನ್ನೂ ಕಂಗಾಲಾಗಿಸಿದೆ.

ಇದನ್ನೂ ಓದಿ; ಅಕ್ಕಿ ಒಳ್ಳೆಯದಾ..? ಗೋಧಿ ಒಳ್ಳೆಯದಾ..?; ಯಾವುದು ದೇಹಕ್ಕೆ ಉತ್ತಮ.?

ಭಾರತದಲ್ಲಿ ಹೆಚ್ಚುತ್ತಿರುವ ಹೃದಯಘಾತ ಪ್ರಕರಣಗಳು;

ಭಾರತದಲ್ಲಿ ಹೆಚ್ಚುತ್ತಿರುವ ಹೃದಯಘಾತ ಪ್ರಕರಣಗಳು; ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಬದಲಾಗುತ್ತಿರುವ ಜೀವನಮಟ್ಟ ಮತ್ತು ಆಹಾರ ಸೇವನೆಯಲ್ಲಿನ ಬದಲಾವಣೆಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ ಎನ್ನುತ್ತಾರೆ ತಜ್ಞರು. ಯುವಜನರಲ್ಲಿ ಹೃದಯ ಸಮಸ್ಯೆಗಳ ಕೆಲವು ಕಾರಣಗಳನ್ನು ವಿವರಿಸಲಾಗಿದೆ.

ಆಹಾರ ಶೈಲಿಯನ್ನು ಬದಲಿಸಿಕೊಂಡರೆ ಒಳ್ಳೆಯದು;

ಆಹಾರ ಶೈಲಿಯನ್ನು ಬದಲಿಸಿಕೊಂಡರೆ ಒಳ್ಳೆಯದು; ಹೃದಯಾಘಾತದಿಂದ ಬಳಲುತ್ತಿರುವವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವೈದ್ಯರು ಹೇಳುತ್ತಾರೆ. ಅವರಲ್ಲಿ ಕೆಲವರಿಗೆ ಇದ್ದಕ್ಕಿದ್ದಂತೆ ಹೃದಘಾತವಾಗಿ ತಕ್ಷಣವೇ ಸಾಯುತ್ತಿದ್ದಾರೆ. ಆದರೆ ಉತ್ತಮ ಜೀವನಶೈಲಿಯಿಂದ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಉತ್ತಮ ಜೀವನಶೈಲಿಯಿಂದ ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ;ನೀವು ಬಳಸುತ್ತಿರುವ ಅರಿಶಿನ ಅಸಲಿಯಾ..? ನಕಲಿಯಾ..?; ಹೀಗೆ ಪರೀಕ್ಷೆ ಮಾಡಿ!

ಸಕ್ಕರೆ ಕಡಿಮೆ ಮಾಡಿ, ಗೋಧಿ ಬಳಕೆ ಬಿಡಿ;

ಸಕ್ಕರೆ ಕಡಿಮೆ ಮಾಡಿ, ಗೋಧಿ ಬಳಕೆ ಬಿಡಿ; ಶೂನ್ಯ ಸಕ್ಕರೆಯೊಂದಿಗೆ ಸಮತೋಲಿತ ಆಹಾರವನ್ನು ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಗೋಧಿಯ ಸೇವನೆಯನ್ನು ಕಡಿಮೆ ಮಾಡಿ, ರಾಗಿ, ತೊಗರಿ, ಜೋಳ, ಅವರೆ, ಸೋಯಾಬೀನ್ ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಪ್ರಮಾಣದ ಎಣ್ಣೆ ಮತ್ತು ತುಪ್ಪವನ್ನು ತೆಗೆದುಕೊಳ್ಳಲು  ಕೂಡಾ ವೈದ್ಯರು ಸೂಚಿಸಿದ್ದಾರೆ.

ನಿಯಮಿತವಾಗಿ ವ್ಯಾಯಾಮ ಮಾಡಬೇಕು;

ನಿಯಮಿತವಾಗಿ ವ್ಯಾಯಾಮ ಮಾಡಬೇಕು; ಹೃದಯವನ್ನು ಆರೋಗ್ಯವಾಗಿಡಲು ವ್ಯಾಯಾಮವನ್ನು ಅಭ್ಯಾಸ ಮಾಡಲು ಸೂಚಿಸಲಾಗುತ್ತದೆ. ಪ್ರತಿದಿನ 10 ಸಾವಿರ ಹೆಜ್ಜೆ ನಡೆಯಬೇಕೆಂಬ ನಿಯಮವನ್ನು ಪಾಲಿಸುವುದು ಒಳ್ಳೆಯದು. ಕುಳಿತುಕೊಳ್ಳುವ ಸಮಯವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಿದರೆ, ನೀವು ಶೇಕಡಾ 50 ರಷ್ಟು ರೋಗಗಳನ್ನು ಕಡಿಮೆ ಮಾಡಬಹುದು ಎಂದು ವೈದ್ಯ ಹೇಳುತ್ತಾರೆ.  ಸಾಧ್ಯವಾದಷ್ಟು ಪ್ರತಿ ಎರಡು ಗಂಟೆಗಳಿಗೊಮ್ಮೆ ಎದ್ದು ನಡೆಯಲು ತಜ್ಞ ವೈದ್ಯರು ಸೂಚನೆ ಕೊಡುತ್ತಾರೆ. ಸ್ನಾಯುಗಳನ್ನು ಬಲವಾಗಿಡಲು ಪುಶ್ ಅಪ್ಸ್, ವೇಟ್ ಲಿಫ್ಟಿಂಗ್ ಇತ್ಯಾದಿ ಕೆಲವು ವ್ಯಾಯಾಮಗಳು ಅಗತ್ಯ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಬಳ್ಳಾರಿ ಮಾಡ್ಯೂಲ್‌; ಶಂಕಿತ ನಾಲ್ವರು ಹೇಳಿದ್ದೇನು..?

ಸೂರ್ಯ ನಮಸ್ಕಾರ ಅತ್ಯುತ್ತಮ ವ್ಯಾಯಾಮ;

ಸೂರ್ಯ ನಮಸ್ಕಾರ ಅತ್ಯುತ್ತಮ ವ್ಯಾಯಾಮ; ಒಟ್ಟಾರೆ ಫಿಟ್‌ನೆಸ್‌ಗಾಗಿ ಸೂರ್ಯ ನಮಸ್ಕಾರ ಅತ್ಯುತ್ತಮ ವ್ಯಾಯಾಮ ಎಂದು ಹೇಳಲಾಗುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಯೋಗ ಮತ್ತು ಧ್ಯಾನದಂತಹ ವಿಷಯಗಳನ್ನು ಅಭ್ಯಾಸ ಮಾಡಲು ಸೂಚಿಸಲಾಗುತ್ತದೆ. ಇದು ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್‌ನಂತಹ ಗ್ಯಾಜೆಟ್‌ಗಳಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಲು ಸೂಚಿಸಲಾಗುತ್ತದೆ.

Share Post